ಬಿಜೆಪಿ, ಆರೆ‌ಸ್ಸೆಸ್ ನಿಂದ ನನ್ನ ಹತ್ಯೆಗೆ ಸಂಚು: ತೇಜ್ ಪ್ರತಾಪ್ ಯಾದವ್

Update: 2018-08-23 16:31 GMT

ವೈಶಾಲಿ (ಬಿಹಾರ್), ಆ. 23: ಮಹುವಾದಲ್ಲಿ ಬುಧವಾರ ಈದ್ ವೇಳೆ ಜನರನ್ನು ಭೇಟಿಯಾದ ಸಂದರ್ಭ ಶಸಸ್ತ್ರಧಾರಿ ವ್ಯಕ್ತಿ ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡರು ಎಂದು ಆರ್‌ಜೆಡಿಯ ನಾಯಕ ಹಾಗೂ ಲಾಲು ಪ್ರಸಾದ್ ಅವರ ಪುತ್ರ ತೇಜ್ ಪ್ರತಾಪ್ ಹೇಳಿದ್ದಾರೆ.

ಈ ಘಟನೆ ತನ್ನನ್ನು ಹತೈಗೈಯಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ರೂಪಿಸಿದ ಪಿತೂರಿ ಎಂದು ಅವರು ಆರೋಪಿಸಿದ್ದಾರೆ. ‘‘ನಾನು ಮಹುವಾಗೆ ತೆರಳುತ್ತಿರುವಾಗ ಶಶಸ್ತ್ರ ವ್ಯಕ್ತಿ ನನ್ನ ಕೈ ಹಿಡಿದುಕೊಂಡರು. ಇದು ನನ್ನನ್ನು ಹತ್ಯೆಗೈಯಲು ಬಿಜೆಪಿ ಹಾಗೂ ಆರ್‌ಎಸ್‌ಎಸ್ ನಡೆಸಿದ ಪಿತೂರಿ. ಶಾಸಕರು, ಸಚಿವರು ಇಲ್ಲಿ ಸುರಕ್ಷಿತರಲ್ಲ. ಸಾಮಾನ್ಯ ಜನರು ಸುರಕ್ಷಿತರಾಗಿರಲು ಹೇಗೆ ಸಾಧ್ಯ ?’’ ಎಂದು ತೇಜ್ ಪ್ರತಾಪ್ ಪ್ರಶ್ನಿಸಿದ್ದಾರೆ.

ಮಹುವಾದಲ್ಲಿ ತನ್ನನ್ನು ಅಭಿನಂದಿಸಲು ಸೇರಿದ ಜನರ ನಡುವೆ ಆ ವ್ಯಕ್ತಿಯನ್ನು ನನ್ನ ಚಾಲಕ ಗುರುತಿಸಿದ್ದರು. ಕೂಡಲೇ ಚಾಲಕ ಹಾಗೂ ಇನ್ನೊಬ್ಬರು ಕೂಗಿಕೊಂಡರು. ಕೂಡಲೇ ಆತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News