ಕೇರಳ: ಆನೆ ತುಳಿತಕ್ಕೆ ವಲಸೆ ಕಾರ್ಮಿಕ ಬಲಿ

Update: 2018-08-26 10:04 GMT

ಕಾಳಿಕ್ಕಾವ್, ಆ.26: ಚೊಕ್ಕಾಡ್ 40 ಸೆಂಟ್ ಗಿರಿಜನ ಕಾಲನಿಯ ಸಮೀಪ ಜಾರ್ಖಂಡ್ ನ ವಲಸೆ ಕಾರ್ಮಿಕರೊಬ್ಬರು ಆನೆಯ ತುಳಿತಕ್ಕೆ ಬಲಿಯಾಗಿದ್ದಾರೆ. ತೋಟದ ಕಾರ್ಮಿಕನಾಗಿ ಕೆಲಸಮಾಡುತ್ತಿದ್ದ ಜಾರ್ಖಂಡ್ ನ ಮಹೇಶ್ ಎಂಬವರು ರವಿವಾರ ಮುಂಜಾನೆ ನಾಲ್ಕು ಗಂಟೆಗೆ ಆನೆ ತುಳಿತಕ್ಕೊಳಗಾಗಿ ಮೃತಪಟ್ಟರು.

ಮೃತ ಮಹೇಶ್(39) ಸ್ಥಳೀಯ ವ್ಯಕ್ತಿಯೊಬ್ಬರ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ನಾಯಿ ಬೊಗಳುವುದನ್ನು ಕೇಳಿ ಹೊರಗೆ ಬಂದ ಮಹೇಶ್‍ರನ್ನು ಆನೆ ತುಳಿದಿದೆ ಎಂದು ಇತರ ಕಾರ್ಮಿಕರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News