ಗಾಂಧಿಯನ್ನು ನಾನೇ ಕೊಲ್ಲುತ್ತಿದ್ದೆ ಎಂದ ಹಿಂದೂ ಮಹಾಸಭಾ ನಾಯಕಿ

Update: 2018-08-26 10:53 GMT

ಹೊಸದಿಲ್ಲಿ, ಆ.26: ತಾನು ನಾಥೂರಾಮ್ ಗೋಡ್ಸೆಗಿಂತ ಮೊದಲೇ ಜನಿಸಿದ್ದರೆ ಮಹಾತ್ಮಾ ಗಾಂಧೀಜಿಯನ್ನು ತನ್ನ ಕೈಯಾರೆ ಕೊಲ್ಲುತ್ತಿದ್ದೆ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಭಾರತದಲ್ಲಿ ಮತ್ತೊಬ್ಬ ಮಹಾತ್ಮಾ ಆಗಲು ಯಾರಾದರೂ ಇಚ್ಛಿಸಿದರೆ ಆತ/ಆಕೆಯನ್ನು ಗುಂಡಿಕ್ಕಿ ಕೊಲ್ಲುತ್ತೇನೆ ಎಂದು ಪೂಜಾ ಪಾಂಡೆ ಬೆದರಿಕೆ ಹಾಕಿದ್ದಾರೆ. ದೇಶ ವಿಭಜನೆಗೆ ಹಾಗು ವಿಭಜನೆಯ ಸಂದರ್ಭ ಲಕ್ಷಾಂತರ ಹಿಂದೂಗಳ ಸಾವಿಗೆ ಗಾಂಧಿಜಿಯೇ ಕಾರಣ ಎಂದವರು ಆರೋಪಿಸಿದರು.

“ನಾನು ಗೋಡ್ಸೆಗಿಂತ ಮೊದಲೇ ಜನಿಸಿದ್ದರೆ ಗಾಂಧಿಯನ್ನು ನನ್ನ ಕೈಯಾರೆ ಕೊಲ್ಲುತ್ತಿದ್ದೆ” ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News