ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ

Update: 2018-08-26 17:07 GMT

ಕೊಲ್ಲೂರು, ಆ.26: ಜಡ್ಕಲ್ ಗ್ರಾಮದ ಸೌಪರ್ಣಿಕ ಹೊಳೆಯಲ್ಲಿ ಅಕಸ್ಮಿಕ ವಾಗಿ ಬಿದ್ದು ವ್ಯಕ್ತಿ ಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಯಳಜಿತ್ ಗ್ರಾಮದ ತೊಂಡ್ಲೆ ನಿವಾಸಿ ರಾಮಚಂದ್ರ ಶ್ಯಾನ್ ಬಾಗ್(60) ಎಂದು ಗುರುತಿಸಲಾಗಿದೆ. ಇವರು ಆ.14ರಂದು ರಾತ್ರಿ ಬೆಂಗಳೂರಿ ನಿಂದ ಬಸ್ಸಿನಲ್ಲಿ ಹೊರಟು ಆ.15ರಂದು ಬೆಳಗ್ಗೆ 7:30 ಗಂಟೆಗೆ ಹಾಲ್ಕಲ್ನಲ್ಲಿ ಬಸ್ಸಿನಿಂದ ಇಳಿದವರು ಮನೆಗೆ ಹೋದವರು ನಾಪತ್ತೆಯಾಗಿ ದ್ದರು. ಆ.25ರಂದು ಮಧ್ಯಾಹ್ನ ವೇಳೆ ಇವರ ಮೃತದೇಹವು ಜಡ್ಕಲ್ ಹೊಳೆ ಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News