ಬಿಹಾರ: ಮಾಜಿ ಸಿಪಿಐ(ಎಂಎಲ್) ಕಾರ್ಯಕರ್ತ ಗುಂಡಿಗೆ ಬಲಿ
Update: 2018-08-27 16:45 GMT
ಆರಾ,ಆ.27: ಭೋಜಪುರ ಜಿಲ್ಲೆಯ ನಾಧಿ ಗ್ರಾಮದಲ್ಲಿ ಸೋಮವಾರ ಅಪರಿಚಿತ ದುಷ್ಕರ್ಮಿಗಳು ಮಾಜಿ ಸಿಪಿಐ(ಎಂಎಲ್) ಕಾರ್ಯಕರ್ತ ರಮಾಕಾಂತ ರಾಮ್(45) ಎಂಬಾತನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ರಾಮ್ 2001ರಲ್ಲಿ ರಣವೀರ ಸೇನಾಕ್ಕೆ ಸೇರಿದ್ದ ಇಬ್ಬರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದಾಗ ಆತನ ಮೇಲೆ ದಾಳಿ ನಡೆದಿದೆ ಎಂದು ತರಾರಿ ಸಿಪಿಐ(ಎಂಎಲ್) ಶಾಸಕ ಸುದಾಮ ಪ್ರಸಾದ ತಿಳಿಸಿದರು.