ಅಂದರ್ ಬಾಹರ್: 9 ಮಂದಿ ಸೆರೆ, ಕಾರು ಬೈಕ್ ವಶ

Update: 2018-08-29 16:08 GMT

ಮಣಿಪಾಲ, ಆ.29: ಮಣಿಪಾಲದ ಕೊಠಡಿಯೊಂದರಲ್ಲಿ ಆ.28ರಂದು ರಾತ್ರಿ ಅಂದರ್ ಬಾಹರ್ ಇಸ್ಫೀಟು ಜುಗಾರಿ ಆಡುತ್ತಿದ್ದ ಒಂಭತ್ತು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಹಿರಿಯಡ್ಕದ ಪ್ರಭಾಕರ ಶೇರಿಗಾರ್(38), ಹುನುಮಂತನಗರದ ಚಂದ್ರ ಶೇಖರ್ ಪೂಜಾರಿ(33), ಕಾಟಿಪಳ್ಳದ ಅಜಿತ್(53), ಬಡಗಬೆಟ್ಟುವಿನ ಸುನೀಲ್ (31), ಸಂತೆಕಟ್ಟೆಯ ರಾಮ ನಾಯ್ಕ(31), ಲಕ್ಷ್ಮೀಂದ್ರನಗರದ ವಾದಿರಾಜ್(46), ಓಂತಿಬೆಟ್ಟುವಿನ ಪ್ರವೀಣ್ ಕುಮಾರ್ ಶೆಟ್ಟಿ(36), ಕಕ್ಕುಂಜೆಯ ಸಂತೋಷ್ ಕುಮಾರ್(36), ಮಂಗಳೂರಿನ ಶಂಕರ್ ಶೇರಿಗಾರ್ (60) ಬಂಧಿತ ಆರೋಪಿಗಳು.

ಬಂಧಿತರಿಂದ 13 ಮೊಬೈಲ್ ಪೋನ್, ಮೂರು ಕಾರು, ಮೂರು ಬೈಕು ಗಳು ಹಾಗೂ 50323ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News