ಸೆ.1: ಈದ್ ಸ್ನೇಹ ಕೂಟ

Update: 2018-08-31 15:56 GMT

ಉಳ್ಳಾಲ, ಆ.31: ಜಮಾಅತೆ ಇಸ್ಲಾಮೀ ಹಿಂದ್ ಹಾಗೂ ಪೊಸಕುರಲ್ ಬಳಗ ಉಳ್ಳಾಲ ಇದರ ಜಂಟಿ ಸಹಯೋಗದಲ್ಲಿ ಸೆ.1ರಂದು ಸಂಜೆ 4:45ಕ್ಕೆ ಅಸೈಗೋಳಿಯ ಬಂಟರ ಭವನದಲ್ಲಿ ಈದ್ ಸ್ನೇಹ ಕೂಟ ಜರುಗಲಿದೆ.

ಬೆಳ್ಮ ಕೊಣಾಜೆಯ ಸಿ.ಎಸ್.ಐ. ಬೆಥಾನ್ಯ ಸಭೆಯ ಧರ್ಮಗುರು ವಂ.ಆ್ಯಂಡ್ರೂ ಜಾನ್, ಹರೇಕಳ ಶ್ರೀರಾಮಕೃಷ್ಣ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಕೆ.ರವೀಂದ್ರ ರೈ, ತೊಕ್ಕೊಟ್ಟಿನ ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ ಈದ್ ಸಂದೇಶವನ್ನು ನೀಡಲಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಕ ಅಬ್ದುಸ್ಸಲಾಮ್ ಯು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸದ್ಭಾವನಾ ವೇದಿಕೆ ಉಳ್ಳಾಲ ಇದರ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ರಾಜ್ಯ ಆಹಾರ ಜಾಗೃತ ಸಮಿತಿಯ ನಿರ್ದೇಶಕ ಟಿ.ಎಸ್.ಅಬ್ದುಲ್ಲ ಸಾಮಣಿಗೆ, ಅಸೈಗೋಳಿಯ ಶ್ರೀ ಅಯ್ಯಪ್ಪಮಂದಿರ ಜೀರ್ಣೋದ್ಧಾರ ಸಮಿತಿಯ ಸಂಚಾಲಕ ಶ್ರೀನಿವಾಸ ಶೆಟ್ಟಿ ಪಟ್ಟೋರಿ, ದ.ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಹಾಗೂ ಕೊಣಾಜೆ ಠಾಣೆಯ ನಿರೀಕ್ಷಕ ಪಿ. ಅಶೋಕ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News