ಆತ್ಮಹತ್ಯೆ ಯತ್ನಿಸಿದ ಮುಳಿಯಾರು ಗ್ರಾಮಾಧಿಕಾರಿ

Update: 2018-08-31 17:17 GMT

ಕಾಸರಗೋಡು, ಆ. 31: ಕರ್ತವ್ಯಲೋಪ ಆರೋಪದಲ್ಲಿ ಅಮಾನತುಗೊಂಡ ಮುಳಿಯಾರು ಗ್ರಾಮಾಧಿಕಾರಿ ಆತ್ಮಹತ್ಯೆಗೆತ್ನಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

ಮುಳಿಯಾರು ಗ್ರಾಮಾಧಿಕಾರಿ ಎ. ಬಿಂದು (40) ಆತ್ಮಹತ್ಯೆಗೆತ್ನಿಸಿದವರು.

ಅಮಾನತು ಆದೇಶದ ಸುದ್ದಿ ತಿಳಿದ ಬಿಂದು ಕೈ ನರ ತುಂಡರಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.  ಇವರನ್ನು ಕಾಸರಗೋಡು  ಖಾಸಗಿ ಆಸ್ಪತ್ರೆಗೆ ದಾಖಲಿಸಿ ದ್ದಾರೆ. ಕರ್ತವ್ಯ ಲೋಪ ಆರೋಪದಲ್ಲಿ ಬಿಂದು ಅವರನ್ನು  ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಶುಕ್ರವಾರ ಅಮಾನತುಗೊಳಿಸಿದ್ದರು .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News