ವ್ಯಾಟ್ಸ್ಆ್ಯಪ್ ಗ್ರೂಪ್ ನೋಂದಾಯಿಸಲು ಪತ್ರಕರ್ತರಿಗೆ ಉತ್ತರ ಪ್ರದೇಶ ಜಿಲ್ಲಾಡಳಿತ ಸೂಚನೆ !
Update: 2018-08-31 18:15 GMT
ಲಕ್ನೋ, ಆ. 31: ಮಾಧ್ಯಮವನ್ನು ಬಾಯಿಮುಚ್ಚಿಸುವ ಪ್ರಯತ್ನವಾಗಿ, ಉತ್ತರಪ್ರದೇಶದ ಲಲಿತ್ಪುರ ಜಿಲ್ಲಾ ಆಡಳಿತ ತಮ್ಮ ವಾಟ್ಸ್ಆ್ಯಪ್ ಗುಂಪಿನ ವಿವರಗಳನ್ನು ಸಲ್ಲಿಸುವಂತೆ ಪತ್ರಕರ್ತರಿಗೆ ಸೂಚಿಸಿದೆ ಎಂದು ಆರೋಪಿಸಲಾಗಿದೆ.
ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮುಖ್ಯಸ್ಥರಾಗಿರುವ ರಾಜ್ಯ ಮಾಹಿತಿ ಇಲಾಖೆಯಲ್ಲಿ ತಮ್ಮ ವ್ಯಾಟ್ಸ್ಆ್ಯಪ್ ಗುಂಪನ್ನು ನೋಂದಾಯಿಸುವಂತೆ ಜಿಲ್ಲೆಯಲ್ಲಿರುವ ಪತ್ರಕರ್ತರಿಗೆ ಆದೇಶ ನೀಡಲಾಗಿದೆ. ಆದೇಶ ಅನುಸರಿಸಲು ವಿಫಲವಾದಲ್ಲಿ ಐಟಿ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆ.