ಪವಿತ್ರ ಗ್ರಂಥದ ಹಾಳೆಯಲ್ಲಿ ಚಪಾತಿ ಪಾರ್ಸೆಲ್ : ಗುರುದ್ವಾರದ ಅರ್ಚಕ, ಪತ್ನಿ ಬಂಧನ

Update: 2018-09-01 14:28 GMT

ಫಿರೋಝ್‌ಪುರ್ (ಪಂಜಾಬ್), ಸೆ. 1: ತಮ್ಮ ಇಬ್ಬರು ಶಾಲೆಗೆ ಹೋಗುವ ಮಕ್ಕಳ ಟಿಫಿನ್ ಅನ್ನು ಪವಿತ್ರ ಗ್ರಂಥದ ಹಾಳೆಗಳಲ್ಲಿ ಕಟ್ಟಿ ಅವಮಾನ ಮಾಡಿದ ಆರೋಪದಲ್ಲಿ ಗುರುದ್ವಾರದ ಅರ್ಚಕ ಹಾಗೂ ಅವರ ಪತ್ನಿಯನ್ನು ಪೊಲೀಸರು ಬಂಸಿದ್ದಾರೆ. ಶಾಲೆಗೆ ಹೋಗುವ ತನ್ನ ಮಕ್ಕಳಿಗೆ ಮಧ್ಯಾಹ್ನಕ್ಕೆ ಚಪಾತಿಯನ್ನು ಪವಿತ್ರ ಧರ್ಮ ಗ್ರಂಥದ ಹಾಳೆಯಲ್ಲಿ ಕಟ್ಟಿ ಕಳುಹಿಸಿದ ಆರೋಪಕ್ಕೆ ಅರ್ಚಕರು ಹಾಗೂ ಅವರ ಪತ್ನಿ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿ ಸಂಘಟನೆ ಸಿಖ್ ಸ್ಟೂಡೆಂಟ್ ಫೆಡರೇಶನ್‌ನ ಸದಸ್ಯರು ಇದನ್ನು ಮೊದಲು ಗಮನಿಸಿದರು. ಅನಂತರ ಅವರು ಇದರ ಬಗ್ಗೆ ತನಿಖೆ ನಡೆಸಿ ಪೊಲೀಸರಿಗೆ ಮಾಹಿತಿ ನೀಡಿದರು.

ಗುರ್ದಿತ್ ಸಿಂಗ್ ಅವರ ಇಬ್ಬರು ಮಕ್ಕಳು ಶಾಲೆಗೆ ಆಹಾರವನ್ನು ಪವಿತ್ರ ಗ್ರಂಥದ ಹಾಳೆಗಳಲ್ಲಿ ಸುತ್ತಿ ತಂದಿದ್ದ ಹಿನ್ನೆಲೆಯಲ್ಲಿ ನಾವು ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಸಿಖ್ ಸ್ಟೂಡೆಂಟ್ ಪೆಡರೇಶನ್ ಅಧ್ಯಕ್ಷ ಜಸ್ಪಾಲ್ ಸಿಂಗ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News