ಕಲ್ಲಡ್ಕದಲ್ಲಿ ಚೂರಿ ಇರಿದ ಪ್ರಕರಣ: ಆರೋಪಿ ಸೆರೆ
ಬಂಟ್ವಾಳ, ಸೆ. 1: ಕಲ್ಲಡ್ಕದಲ್ಲಿ ಎಂಟು ತಿಂಗಳ ಹಿಂದೆ ನಡೆದ ಚೂರಿ ಇರಿತ ಪ್ರಕರಣದ ಅರೋಪಿಯನ್ನು ಬಂಟ್ವಾಳ ನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಕಲ್ಲಡ್ಕ ನಿವಾಸಿ ಫಾರೂಕ್ ಯಾನೆ ಚೆನ್ನ ಫಾರೂಕ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ.
ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ವೀರಕಂಭ ನಿವಾಸಿ ಕೇಶವ ಎಂಬಾತನಿಗೆ ಕಲ್ಲಡ್ಕದಲ್ಲಿ ಎಂಟು ತಿಂಗಳ ಹಿಂದೆ ಚೂರಿ ಇರಿತ ಪ್ರಕರಣದ ಆರೋಪಿಯಾಗಿದ್ದ ಫಾರೂಕ್ ನಂತರ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ.
ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮತ್ತು ಬಂಟ್ವಾಳ ನಗರ ಠಾಣಾ ಉಪನಿರೀಕ್ಷಕ ಚಂದ್ರಶೇಖರ್, ಅಪರಾಧ ವಿಭಾಗದ ಎಸ್ಸೈ ಹರೀಶ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ನೇತೃತ್ವದಲ್ಲಿ ಈತನನ್ನು ಕಲ್ಲಡ್ಕದ ಲ್ಲಿ ಬಂಧಿಸಲಾಗಿದೆ.
ಆರೋಪಿ ಫಾರೂಕ್ಗೆ ಆಶ್ರಯ ನೀಡಿದ ಕಲ್ಲಡ್ಕ ನಿವಾಸಿ ತೌಫೀಕ್ ಎಂಬಾತನನ್ನು ಕೂಡಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.