ಹೆಬ್ರಿ: ಗಮನ ಸೆಳೆದ ತ್ರಿವಳಿ ಮುದ್ದುಕೃಷ್ಣರು

Update: 2018-09-02 12:56 GMT

ಹೆಬ್ರಿ, ಸೆ.2: ಹೆಬ್ರಿ ಜೇಸಿಐ ಆಶ್ರಯದಲ್ಲಿ ಹೆಬ್ರಿ ಅನಂತಪದ್ಮನಾಭದಲ್ಲಿ ಇಂದು ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ತ್ರಿವಳಿ ಪುಟಾಣಿಗಳು ಭಾಗವಹಿಸಿ ಪ್ರಥಮ ಬಹುಮಾನ ಪಡೆಯುದರೊಂದಿಗೆ ಪ್ರೇಕ್ಷಕರ ಗಮನ ಸಳೆದರು.

ಬಚ್ಚಪ್ಪು ಶ್ರಿಪಾದ ಉಷಾ ದಂಪತಿಯ ತ್ರಿವಳಿ ಮಕ್ಕಳಾದ ಸಂಜನಾ, ಸಿಂಚನಾ, ಸೃಜನಾ ಬಹುಮಾನ ಪಡೆದುಕೊಂಡರು.

ಈ ಸ್ಪರ್ಧೆಯಲ್ಲಿ ಒಟ್ಟು 45 ಮುದ್ದುಕೃಷ್ಣ ವೇಷಧಾರಿಗಳು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಸಿಂಚನಾ ಪ್ರಥಮ, ಹಾರ್ದಿಕ್ ಎಸ್.ಹೆಬ್ಬಾರ್ ದ್ವಿತೀಯ, ಮಾನ್ಯ ಯು.ಶೆಟ್ಟಿ ತೃತೀಯ ಬಹುಮಾನ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರವನ್ನು ವಿತರಿಸಿ, ಗೌರವಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News