ಪುತ್ತೂರು: ತಂದೆ ಪ್ರತಿನಿಧಿಸುತ್ತಿದ್ದ ವಾರ್ಡ್‍ನಲ್ಲಿ ಪುತ್ರನ ಗೆಲುವು

Update: 2018-09-03 14:13 GMT

ಪುತ್ತೂರು, ಸೆ. 3: ಹಿಂದಿನ ಪುರಸಭೆಯಲ್ಲಿ 2 ಬಾರಿ ಕಾಂಗ್ರೆಸ್ ಸದಸ್ಯರಾಗಿದ್ದು, ಒಂದು ಬಾರಿ ನಾಮನಿರ್ದೇಶನ ಸದಸ್ಯರಾಗಿದ್ದ  ದಿ. ಅಬ್ದುಲ್ ಹಮೀದ್ ಅವರ ಪುತ್ರ ಮಹಮ್ಮದ್ ರಿಯಾಝ್ ಮೊದಲ ಬಾರಿಗೆ ವಾರ್ಡ್ 29ರಲ್ಲಿ  ಗೆಲವು ಪಡೆದಿದ್ದಾರೆ.

2 ಅವಧಿಯಲ್ಲಿ ಪುರಸಭಾ ಸದಸ್ಯರಾಗಿದ್ದ ಅಬ್ದುಲ್ ಹಮೀದ್ ಅವರು ಕಳೆದ ಬಾರಿ ನಾಮನಿರ್ದೇಶನ ಸದಸ್ಯರಾಗಿದ್ದರು. ಈ ಸಂದರ್ಭದಲ್ಲಿ ಅವರು ಅನಾರೋಗ್ಯದಿಂದ ನಿಧನರಾಗಿದ್ದರು. ಇದೀಗ ಅದೇ ವಾರ್ಡ್‍ನಲ್ಲಿ ಅವರ ಪುತ್ರ ಮಹಮ್ಮದ್ ರಿಯಾಝ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ದಯಾನಂದ ಎಂ ಅವರನ್ನು 12 ಮತಗಳ ಅಂತರದ ಗೆಲುವು ಪಡೆದಿದ್ದಾರೆ. ರಿಯಾಝ್ ಅವರು 214 ಮತಗಳನ್ನು ಪಡೆದಿದ್ದು, ದಯಾನಂದ ಅವರು 202 ಮತಗಳನ್ನು ಗಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News