ಬ್ರಹ್ಮಾವರ: ಮನೆಗೆ ನುಗ್ಗಿ 6 ಲಕ್ಷ ರೂ. ಮೌಲ್ಯದ ಸೊತ್ತು ಕಳವು

Update: 2018-09-03 16:34 GMT

ಬ್ರಹ್ಮಾವರ, ಸೆ. 3: ಚಾಂತಾರು ಗ್ರಾಮದ ತೆಂಕುಬೆಟ್ಟುವಿನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ತೆಂಕುಬೆಟ್ಟುವಿನ ಅಶೋಕ ಶೆಟ್ಟಿ ಎಂಬವರು ಕುಟುಂಬ ಸಮೇತ ಆ.30 ರಂದು ಮನೆಗೆ ಬೀಗ ಹಾಕಿ ತಿರುಪತಿಗೆ ತೆರಳಿದ್ದರು. ಇಂದು ಬೆಳಗ್ಗೆ ಮರಳಿ ಮನೆಗೆ ಬಂದು ನೋಡುವಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಮನೆಯಲ್ಲಿ ಯಾರು ಇಲ್ಲದ ಸಮಯ ಬಾಗಿಲಿನ ಬೀಗ ಮುರಿದು ಒಳಗೆ ನುಗ್ಗಿದ ಕಳ್ಳರು, 50,000 ರೂ. ನಗದು, ಚಿನ್ನದ ಸರ, ಎರಡು ಚಿನ್ನದ ಉಂಗುರ, ಮೂರು ಚಿನ್ನದ ನೆಕ್ಲೆಸ್, ಮೂರು ಚಿನ್ನದ ಬಳೆಗಳು, ಒಂದು ವಜ್ರದ ಉಂಗುರ, ನಾಲ್ಕು ಜೊತೆ ಕಿವಿಯೊಲೆ, 8 ಬೆಳ್ಳಿಯ ಹರಿವಾಣಗಳನ್ನು ಕಳವು ಮಾಡಿ ದ್ದಾರೆ. ಇವುಗಳ ಒಟ್ಟು ಮೌಲ್ಯ 6,31,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News