ಬ್ರಹ್ಮಾವರ : ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು

Update: 2018-09-03 16:37 GMT

ಬ್ರಹ್ಮಾವರ, ಸೆ.3: ಕಾರ್ಮಿಕರೊಬ್ಬರು ಲ್ಯಾಟ್ರಿನ್ ಸ್ಲಾಬ್‌ನಿಂದ ಕೆಳಗೆ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸೆ.3ರಂದು ಬೆಳಗ್ಗೆ ಕೊಕ್ಕರ್ಣೆ ಶ್ರೀದುರ್ಗಾ ಆಂಗ್ಲ ಮಾಧ್ಯಮ ಶಾಲೆಯ ಸಮೀಪ ನಡೆದಿದೆ.

 ಮೃತರನ್ನು ಶೀರೂರು ಗ್ರಾಮದ ಜೇರಾಳಗುಡ್ಡೆಯ ಚಂದ್ರ ನಾಯ್ಕ(45) ಎಂದು ಗುರುತಿಸಲಾಗಿದೆ. ಇವರು ಇತರ ಕಾರ್ಮಿಕರೊಂದಿಗೆ ಸೇರಿ ಶಾಲೆಗೆ ಸಂಬಂಧಿಸಿದ ಹೊಸ ಕಟ್ಟಡದ ಕೆಲಸವನ್ನು ಮಾಡುತ್ತಿದ್ದು, ಕಟ್ಟಡದ ಲ್ಯಾಟ್ರಿನ್ ಸ್ಲಾಬ್ ಮೇಲೆ ನಿಂತು ಗೋಡೆಯ ಗಾರೆ ಮಾಡುತ್ತಿರುವಾಗ ಚಂದ್ರ ನಾಯ್ಕ ಸುಮಾರು ಏಳು ಅಡಿ ಎತ್ತರದಿಂದ ಕಾಲು ಜಾರಿ ಕೆಳಗೆ ಬಿದ್ದು ಗಾಯಗೊಂಡರೆನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಇವರು ಬ್ರಹ್ಮಾವರದ ಸರಕಾರಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಶಾಲೆಯ ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ ಕಾರ್ಮಿಕರ ಸುರಕ್ಷತೆಗೆ ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೆ ನಿರ್ಲಕ್ಷ ವಹಿಸಿರುವುದರಿಂದ ಈ ಸಾವು ಸಂಭವಿಸಿದೆ ಎಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News