ಶಿರೂರು ಶ್ರೀ ಸ್ಮರಣಾರ್ಥ ಹುಲಿವೇಷ ಸ್ಪರ್ಧೆ
Update: 2018-09-03 16:51 GMT
ಉಡುಪಿ, ಸೆ. 3: ಸೋದೆ ವಾದಿರಾಜ ಮಠ, ಶೀರೂರು ಮಠ ಹಾಗೂ ಕಲ್ಕೂರ ಬಿಲ್ಡರ್ಸ್ ಸಹಯೋಗದೊಂದಿಗೆ ಶಿರೂರು ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿಯ ಸ್ಮರಣಾರ್ಥ ವಿಟ್ಲಪಿಂಡಿಯ ಪ್ರಯುಕ್ತ 30ನೆ ವರ್ಷದ ಹುಲಿ ವೇಷ ಸ್ಪರ್ಧೆಯನ್ನು ಇಂದು ಏರ್ಪಡಿಸಲಾಗಿತ್ತು.
ರಥಬೀದಿಯಲ್ಲಿ ನಿರ್ಮಿಸಲಾದ ವೇದಿಕೆಯಲ್ಲಿ ಏರ್ಪಡಿಸಲಾದ ಸ್ಪರ್ಧೆಯನ್ನು ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಉದ್ಘಾಟಿಸಿ ದರು. ಈ ಸಂದರ್ಭದಲ್ಲಿ ಅದಮಾರು ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀವಿದ್ಯಾ ಸಾಗರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು.