ಅಕಾಲ ಹಲಸು ಸಂಗಮ : ಮಳಿಗೆಗಳಿಗೆ ಆಹ್ವಾನ

Update: 2018-09-03 17:08 GMT

ಬಂಟ್ವಾಳ, ಆ. 3: ಪುತ್ತೂರಿನ ನವಚೇತನ ಸ್ನೇಹ ಸಂಗಮ ಮತ್ತು ಅಕಾಲ ಹಲಸು ಸಂಗಮ ಸ್ವಾಗತ ಸಮಿತಿಯ ಆಯೋಜನೆಯಲ್ಲಿ ಸೆ. 8 ಮತ್ತು 9 ರಂದು `ಅಕಾಲ ಹಲಸು ಸಂಗಮ' ಕಾರ್ಯಕ್ರಮವು ಬಿ.ಸಿ.ರೋಡಿನಲ್ಲಿ ಜರುಗಲಿದೆ. 

ಹಲಸಿನ ಋತು ಮುಗಿದ ಬಳಿಕವೂ ಹಲಸಿನ ಬಳಕೆಯು ಬದುಕಿನಲ್ಲಿ ಮಿಳಿತಗೊಳ್ಳಬೇಕೆಂಬ ಸದುದ್ದೇಶದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಹಲಸಿನ ಖಾದ್ಯಗಳ ಪ್ರದರ್ಶನ, ಗಿಡಗಳು, ಅನುಭವಿಗಳಿಂದ ಮಾಹಿತಿಗಳು ಸಂಪನ್ನವಾಗಲಿವೆ. 

ಈ ಸಂದರ್ಭದಲ್ಲಿ ಅರುವತ್ತಕ್ಕೂ ಮಿಕ್ಕಿ ಮಳಿಗೆಗಳನ್ನು ವ್ಯವಸ್ಥೆಗೊಳಿಸಲಿದ್ದೇವೆ. ಹಲಸಿನ ಐಟಂಗಳಿಗೆ ಆದ್ಯತೆ. ಸಂದರ್ಭಾನುಸಾರ ಇನ್ನಿತರ ಉತ್ಪನ್ನಗಳ ಮಳಿಗೆಗಳಿಗೆ ಅವಕಾಶವಿದೆ. ಆಸಕ್ತ ಮಳಿಗೆದಾರರು ಮುಂದಾಗಿ ಮಳಿಗೆಗಳನ್ನು ಕಾದಿರಿಸಿಕೊಳ್ಳಬಹುದು.

ಸೀಮಿತ ಅವಕಾಶವಿರುವುದರಿಂದ ಮುಂದಾಗಿ ನೋಂದಾಯಿಸಿದವರಿಗೆ ಪ್ರಥಮ ಪ್ರಾಶಸ್ತ್ಯ. ಆಸಕ್ತರು  ಅನಂತಪ್ರಸಾದ್ ನೈತ್ತಡ್ಕ (9611543386) ಮತ್ತು ಪಾಂಡುರಂಗ ಭಟ್ ಕುದಿಂಗಿಲ (9741810502) ಇವರನ್ನು ಸಂಪರ್ಕಿಸಬಹುದು. ಸೆಪ್ಟೆಂಬರ್ 6 ಕೊನೆಯ ದಿನಾಂಕ ಎಂದು ಪ್ರಕಟನರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News