'ತೃತೀಯ ಶಕ್ತಿಯ ಉಗಮ: ಜೆಡಿಎಸ್ ಮುಖಂಡರ ನಡೆ ಅನುಸರಿಸಿ ಬೆಂಬಲ'

Update: 2018-09-03 17:27 GMT

ಉಳ್ಳಾಲ, ಸೆ. 3: ಜೆಡಿಎಸ್‍ನ ಚುನಾವಣೆ ಪ್ರಣಾಳಿಕೆ ಸ್ಪಷ್ಟವಾಗಿದ್ದ ಕಾರಣದಿಂದಲೇ ಚುನಾವಣೆಯಲ್ಲಿ ಉಳ್ಳಾಲದ ಮತದಾರರು ಜೆಡಿಎಸ್‍ನ ನಾಲ್ಕು ದಕ್ಷ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಕೆಲವೇ ವಾರ್ಡ್‍ಗಳಲ್ಲಿ ಸ್ಪರ್ಧಿಸದ್ದರೂ 10ಕಡೆ ಗೆಲುವಿನ ಹಂತಕ್ಕೆ ಬಂದು ಬೆರಳೆಣಿಕೆಯ ಮತಗಳ ಅಂತರದಲ್ಲಿ ಆಭ್ಯರ್ಥಿಗಳು ಸೋಲನ್ನು ಕಂಡರೂ ಜನತೆ ನಮ್ಮ ಪರವಾಗಿದ್ದಾರೆ ಎಂಬುದು ಸಾಬೀತಾಗಿದ್ದು ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆ ಆಗಲಿದೆ ಎಂದು ಜೆಡಿಎಸ್ ಕ್ಷೇತ್ರ ಚುನಾವಣಾ ಸಂಚಾಲಕ ನಝೀರ್ ಉಳ್ಳಾಲ ಹೇಳಿದರು.

ಚುನಾವಣಾ ಫಲಿತಾಂಶದ ಬಳಿಕ ತೊಕ್ಕೊಟ್ಟು ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಹಳ ಸಂತಸದಿಂದ ಮಾತನಾಡಿದ ಆವರು ಕಡಿಮೆ ಮತಗಳ ಅಂತರದ ಸೋಲು ನಮ್ಮದಾಗಿದೆ ಎಂಬುದುಕ್ಕೆ ಅರ್ಥ ಮುಂದಕ್ಕೆ ನಾವು ಗೆಲುವು ಸಾಧಿಸಲಿದ್ದೇವೆ ಎಂಬ ಸೂಚನೆಯಾಗಿದೆ. ಜನಪರ ಆಡಳಿತ ಕೊಡುವ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಲಿದ್ದೇವೆ. ತ್ಯಾಜ್ಯ, ಘನತ್ಯಾಜ್ಯ ಘಟಕ ನಿರ್ಮಾಣ, ಭ್ರಷ್ಟಾಚಾರ ಮುಕ್ತ ಆಡಳಿತ ದೂರ ಮಾಡಿ ಪಾರದರ್ಶಕ ಆಡಳಿತ ಕೊಡಲಿದ್ದೇವೆ. ಹತ್ತು ವರ್ಷಗಳ ಬಳಿಕ ಜನತಾದಳದ ಅಭ್ಯರ್ಥಿ ಆಯ್ಕೆಯಾಗಿದ್ದೇವೆ. ಚುನಾವಣೆ ಸಮಯದಲ್ಲಿ ನಾವು ಪ್ರಚಾರದುದ್ದಕ್ಕೂ ಸೀಮಿತ ಸಂಪನ್ಮೂಲ ಸ್ಥಳೀಯ ನಾಯಕರು ಕಾರ್ಯಕರ್ತರನ್ನೇ ಬಳಸಿಕೊಂಡರೂ ಸತತ ಪ್ರಯತ್ನದಿಂದ ಗೆಲುವು ದಾಖಲಿಸಿದ್ದೇವೆ ಎಂದರು.

ಉಳ್ಳಾಲ ನಗರಸಭೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್‍ಗೆ ಬೆಂಬಲ ನೀಡಿದಂತೆ ಕಾಂಗ್ರೆಸ್ ಆಡಳಿತ ನಡೆಸಲು ಮುಂದಾದರೆ ಅದಕ್ಕೆ ಜೆಡಿಎಸ್ ಬೆಂಬಲ ಕೊಡುತ್ತದಾ? ಅಥವಾ ಅಧ್ಯಕ್ಷ ಸ್ಥಾನ ಬಯಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ನಝೀರ್ ಅವರು ಯಾವುದೇ ಬೆಳವಣಿಗೆಗೆ ರಾಜ್ಯ ನಾಯಕರ ಜೊತೆಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ. ನಮ್ಮ ಪಕ್ಷದ ಬೆಳವಣಿಗೆಗೆ ಪೂರಕವಾಗುವ ಅನುಕೂಲಕರ ಹಾಗೂ ಜನತೆಗೆ ನಾವು ಕೊಟ್ಟ ಆಶ್ವಾಸನೆಗಳನ್ನು ಪೂರೈಸಲು ಸಹಕಾಯವಾಗುಂವತಹ ವಾತಾವರಣ ನೋಡಿಕೊಂಡು ಮುಂದಿನ ಹೆಜ್ಜೆ ಇಡುತ್ತೇವೆ ಎಂದು ಹೇಳಿದರು.

ಜೆಡಿಎಸ್ ಮಂಗಳೂರು ಕ್ಷೇತ್ರ ಅಧ್ಯಕ್ಷ ಮೋಹನ್‍ದಾಸ್ ಶೆಟ್ಟಿ, ಮುಖಂಡರಾದ ಹಾಜಿ ಅಬೂಬಕ್ಕರ್ ನಾಟೆಕಲ್, ಮಾಜಿ ಕೌನ್ಸಿಲರ್ ಯು.ಎಚ್. ಫಾರೂಕ್ ಹಾಗೂ ಅಶ್ರಫ್ ಬಾವಾ, ಮಹಮ್ಮದ್ ಮುಸ್ತಫಾ, ಅಲ್ಫ್ರೆಡ್ ಡಿಸೋಜ, ಇಬ್ರಾಹಿಂ ತವಕ್ಕಳ್, ವಿಜೇತ ಅಭ್ಯರ್ಥಿಗಳಾದ ದಿನಕರ್ ಉಳ್ಳಾಲ್, ಖಲೀಲ್, ಅಬ್ದುಲ್ ಜಬ್ಬರ್, ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.   

ಉಳ್ಳಾಲದಲ್ಲಿ ಜೆಡಿಎಸ್ ನಾಲ್ಕು ಸ್ಥಾನಗಳಲ್ಲಿ ಗೆಲ್ಲುವ ಮೂಲಕ ತೃತೀಯ ಶಕ್ತಿಯ ಬೆಳವಣಿಗೆಗೆ ಮತದಾರರು ನಾಂದಿ ಹಾಡಿದ್ದಾರೆ. ಹಾಗಾಗಿ ಸದಸ್ಯರು ಉತ್ತಮ ಸೇವೆ ಮಾಡುತ್ತಾ ಉಳ್ಳಾಲದ ಮೆರೆಗು ಹೆಚ್ಚಿಸಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ತೊಕ್ಕೊಟ್ಟು ಪೇಟೆಯಿಂದ ಕೇವಲ ಒಂದು ಕಿ. ಮೀ. ದೂರದಲ್ಲಿರುವ ಉಳ್ಳಾಲ ನಗರಕ್ಕೆ ಇದುವರೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ಸಾಧ್ಯವಾಗಿಲ್ಲ. ಅಂತಹ ಬಹಳಷ್ಟು ಸಮಸ್ಯೆಗಳನ್ನು ಶಾಶ್ವತವಾಗಿ ನೀಗಿಸಲಿದ್ದೇವೆ.
- ಯು.ಎಚ್. ಫಾರೂಕ್ , ಮಾಜಿ ಕೌನ್ಸಿಲರ್ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News