ಕೆಂಜಾರು: ಯುವಕ ನಾಪತ್ತೆ

Update: 2018-09-03 17:52 GMT

ಮಂಗಳೂರು, ಸೆ.3: ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ಕೆಂಜಾರು ನಿವಾಸಿ ಯೋಗೀಶ್ (28) ಮಂಗಳೂರು ನ್ಯಾಯಾಲಯದಲ್ಲಿ ತನ್ನ ವಿರುದ್ಧದ ಕೇಸಿನ ವಿಚಾರಣೆಗೆ ಹೋಗುವುದಾಗಿ ತಿಳಿಸಿ ನಾಪತ್ತೆಯಾಗಿದ್ದಾರೆ.

ಮುಂಬೈಯಿಂದ ಆ.30ರಂದು ರಾತ್ರಿ ಮನೆಗೆ ಬಂದ ಯೋಗಿಶ್, ಮರುದಿನ ಮಂಗಳೂರು ನ್ಯಾಯಾಲಯದಲ್ಲಿ ಆತನ ವಿರುದ್ಧ ಕೇಸಿನ ವಿಚಾರಣೆ ಬಗ್ಗೆ ಹೋಗುತ್ತಿರುವುದಾಗಿ ಹೇಳಿ ತೆರಳಿದ್ದಾರೆ.ಮಧ್ಯಾಹ್ನ 2 ಗಂಟೆಗೆ ಪ್ರಶಾಂತ ಎಂಬವರಿಗೆ ಕರೆ ಮಾಡಿ ತನಗೆ ಜೀವನದಲ್ಲಿ ಬೇಸರ ಉಂಟಾಗಿದ್ದು, ಸಾಧ್ಯವಾದರೆ ಮನೆಗೆ ಬರುತ್ತೇನೆ. ಇಲ್ಲವಾದರೆ ಬರುವುದಿಲ್ಲ. ತನ್ನನ್ನು ಹುಡುಕಬೇಡಿ ಎಂದು ತಿಳಿಸಿರುವುದಾಗಿ ಯೋಗೀಶ್ ಸಹೋದರ ಭಾಸ್ಕರ್ ದೂರು ದಾಖಲಿಸಿದ್ದಾರೆ.

ಚಹರೆ: ನಾಪತ್ತೆಯಾಗಿರುವ ಯೋಗೀಶ್ ಸದೃಢ ಶರೀರ, ಕಪ್ಪು ಮೈಬಣ್ಣ ಹೊಂದಿದ್ದಾರೆ. ಕಪ್ಪು ಮತ್ತು ನಸುಕಂದು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಕನ್ನಡ, ಹಿಂದಿ, ತುಳು ಭಾಷೆ ಮಾತನಾಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News