ಕಳವು ಪ್ರಕರಣ: ಮೂವರ ಬಂಧನ; ಸೊತ್ತು ವಶ

Update: 2018-09-03 17:58 GMT

ಮಂಗಳೂರು, ಸೆ.3: ತಪಾಸಣೆ ವೇಳೆ ದಾಖಲೆಗಳಿಲ್ಲದ ಹಾಗೂ ವಿವಿಧೆಡೆ ಕಳವುಗೈದ ಸೊತ್ತನ್ನು ಹೊಂದಿದ್ದ ಮೂವರು ಆರೋಪಿಗಳನ್ನು ಪದುವಾ ಮೈದಾನದ ಬಳಿ ಸೋಮವಾರ ಬೆಳಗ್ಗೆ ಕದ್ರಿ ಪೊಲೀಸರು ಬಂಧಿಸಿದ್ದಾರೆ.

ಸಂತೋಷ್ ಪೂಜಾರಿ, ಪ್ರಭೀಶ್, ಸಂದೇಶ್ ಬಂಧಿತ ಆರೋಪಿಗಳು.

ಪದುವಾ ಮೈದಾನದ ಬಳಿ ಕದ್ರಿ ಠಾಣೆ ಪಿಎಸ್ಸೈ ಮಾರುತಿ ಎಸ್.ವಿ. ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಯಿತು. ಆರೋಪಿಗಳಿಂದ ವಿವಿಧ ಕಂಪೆನಿಯ ಐದು ಮೊಬೈಲ್‌ಗಳು, ಕೃತ್ಯಕ್ಕೆ ಬಳಸಿದ 50 ಸಾವಿರ ರೂ. ಮೌಲ್ಯದ ಆಕ್ಟಿವಾ ಹೋಂಡಾ, ಸ್ಕೂಟರ್ ಸೇರಿ ಒಟ್ಟು 67 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಕುರಿತು ಈ ಕುರಿತು ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News