ಬೇಲಿಗದ್ದೆ: ಬಾವಿಯಲ್ಲಿ ಅನುಮಾಸ್ಪದ ರೀತಿಯಲ್ಲಿ ಮೃತ ದೇಹ ಪತ್ತೆ

Update: 2018-09-04 15:35 GMT

ಭಟ್ಕಳ, ಸೆ. 4: ಅ.30ರಂದು ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಸೋಮವಾರ ಬೇಲಿಗದ್ದೆ 2ನೆ ಕ್ರಾಸ್ ನ ಅರಣ್ಯ ಜಾಗದ ತೆರೆದ ಬಾವಿಯೊಂದರಲ್ಲಿ ಅನುಮಾಸ್ಪದ ರೀತಿಯಲ್ಲಿ ದೊರೆತಿದ್ದು ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ಕುಟುಂಬದ ಸದಸ್ಯರು ವ್ಯಕ್ತಪಡಿಸುತ್ತಿದ್ದಾರೆ.

ಮೃತ ವೈಕ್ತಿಯನ್ನು ಹೆಬಳೆ ಪಂಚಾಯತ್ ವ್ಯಾಪ್ತಿಯ ಹನೀಫಾಬಾದ್ ತಹಲಾ ಪಳ್ಳಿ ಹತ್ತಿರದ ನಿವಾಸಿ ರಿಝ್ವಾನ್ ಜಲೀಲ್ ಸಾಬ್ ಅತ್ತಾರ್(46) ಎಂದು ಗುರುತಿಸಲಾಗಿದೆ. 

ಮಗಳ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಿ ಆ. 30 ರಂದು ಮನೆಯಿಂದ ಕಾಣೆಯಾಗಿದ್ದ ರಿಝ್ವಾನ್ ಮೃತದೇಹ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿರುವ ತೆರದ ಬಾವಿಯಲ್ಲಿ ಪತ್ತೆಯಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿದಂತಾಗಿದೆ. ಈ ಕುರಿತಂತೆ ಸೆ.1 ರಂದು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ಮಧ್ಯೆ ಕಾಣೆಯಾದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. 
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು  ತನಿಖೆ  ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News