ಪುತ್ತೂರು: ಯುವಕನ ಮೃತದೇಹ ಪತ್ತೆ

Update: 2018-09-04 17:58 GMT

ಪುತ್ತೂರು, ಸೆ. 4: ಪುತ್ತೂರು ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ನಿವಾಸಿ, ಅವಿವಾಹಿತ ಯುವಕನೊಬ್ಬನ ಮೃತದೇಹ ಪುತ್ತೂರಿನ ಪುರಭವನದ ಬಳಿಯ ಮಕ್ಕಳ ಪಾರ್ಕಿನಲ್ಲಿ  ಮಂಗಳವಾರ ಪತ್ತೆಯಾಗಿದೆ.

ಸವಣೂರು ಸಮೀಪದ ಪುಣ್ಚಪ್ಪಾಡಿ ನಿವಾಸಿ ಸುಧಾಕರ ಆಚಾರ್ಯ ಮೃತಪಟ್ಟ ವ್ಯಕ್ತಿ. ತಂದೆ ತಾಯಿಯ ಮರಣದ ನಂತರ ವಿಪರೀತ ಮದ್ಯ ವ್ಯಸನಿಯಾಗಿದ್ದ ಎನ್ನಲಾಗಿದ್ದು, ನಗರದಲ್ಲಿ ಸುತ್ತಾಡಿಕೊಂಡಿದ್ದ ಅವರ ಮೃತದೇಹ ಮಂಗಳವಾರ ಬೆಳಗ್ಗೆ ಪುತ್ತೂರಿನ ಮಕ್ಕಳ ಪಾರ್ಕಿನೊಳಗಿನ ಸಭಾ ವೇದಿಕೆಯಲ್ಲಿ ಪತ್ತೆಯಾಗಿದೆ.

ವಿಪರೀತ ಮದ್ಯ ಸೇವಿಸಿದ ಪರಿಣಾಮವಾಗಿ ಅವರು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ನಗರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News