ಜಾನುವಾರು ಕಳವು ಪ್ರಕರಣ: ಆರೋಪಿ ಸೆರೆ

Update: 2018-09-04 18:15 GMT

ಬಂಟ್ವಾಳ, ಸೆ. 4: ಪುಂಜಾಲಕಟ್ಟೆ  ಠಾಣೆ ವ್ಯಾಪ್ತಿಯಲ್ಲಿನ ದನಕಳವು ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು  ಬಿ.ಸಿ.ರೋಡಿನ ವೃತ್ತ ಬಳಿ ಮಂಗಳೂರು ಡಿಸಿಐಬಿ ಪೊಲೀಸರು ಬಂಧಿಸಿ, ಕಾರು ವಶಪಡಿಸಿದ್ದಾರೆ.

ಬಂಟ್ವಾಳ ತಾಲೂಕಿನ ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಮುಹಮ್ಮದ್ ಇಲಾಲ್ ಯಾನೆ ಇಲಾಲ್ (25) ಬಂಧಿತ ಆರೋಪಿ.

ಮಂಗಳವಾರ ಮುಂಜಾನೆ ಮಂಗಳೂರು ಡಿಸಿಐಬಿ ಪೊಲೀಸರ ತಂಡ ರಾತ್ರಿ ಗಸ್ತಿನಲ್ಲಿದ್ದಾಗ ಬಿ.ಸಿ.ರೋಡ್ ವೃತ್ತದಲ್ಲಿ  ಕಾರ್ಯಾಚರಣೆ ನಡೆಸಿ ಚಾಲಕ ಇಲಾಲ್  ನನ್ನು ಬಂಧಿಸಿ ಕಾರು ಸಹಿತ ಪುಂಜಾಲಕಟ್ಟೆ ಠಾಣೆಗೆ ಹಸ್ತಾಂತರಿಸಿದ್ದಾರೆ. 

ಈ ಪ್ರಕರಣದಲ್ಲಿ ಅಮ್ಮೆಮ್ಮಾರ್ ನಿವಾಸಿ ಮನ್ಸೂರ್ ಯಾನೆ ಮಂಚು, ಅರಫಾ ಯಾನೆ ಅಬೂಬಕರ್ ಸಿದ್ದಿಕ್, ಜೈನು ಯಾನೆ ಜೈನುದ್ದೀನ್ ಮತ್ತು ಫಾರೂಕ್ ಎಂಬವರು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News