×
Ad

ನಗರಸಭೆ ವಿಜೇತ ಬಿಜೆಪಿ ಸದಸ್ಯರ ವಿಜಯೋತ್ಸವ

Update: 2018-09-05 21:08 IST

ಉಡುಪಿ, ಸೆ.5: ಉಡುಪಿ ನಗರಸಭೆ ಚುನಾವಣೆಯಲ್ಲಿ ಬಹುಮತ ಪಡೆದ ಬಿಜೆಪಿ ಪಕ್ಷದ ಎಲ್ಲ 31 ಸದಸ್ಯರ ವಿಜಯೋತ್ಸವ ಮೆರವಣಿಗೆಯು ಬುಧವಾರ ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ನಡೆಯಿತು.

ಕಡಿಯಾಳಿಯ ಬಿಜೆಪಿ ಕಚೇರಿ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮೆರವಣಿಗೆಗೆ ಚಾಲನೆ ನೀಡಿದರು. ಬಿಜೆಪಿ ನಗರ ಅಧ್ಯಕ್ಷ್ಷ ಪ್ರಭಾಕರ ಪೂಜಾರಿ, ಮುಖಂಡರಾದ ಉಪೇಂದ್ರ ನಾಯಕ್, ಜಗದೀಶ್ ಆಚಾರ್ಯ, ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ರಾಘವೇಂದ್ರ ಕಿಣಿ, ರವಿ ಅಮೀನ್, ದಿನಕರ ಶೆಟ್ಟಿ ಹೆರ್ಗ, ಕಟಪಾಡಿ ಶಂಕರ ಪೂಜಾರಿ, ಮಹೇಶ್ ಠಾಕೂರು, ಪ್ರವೀಣ್ ಶೆಟ್ಟಿ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಮೆರವಣಿಗೆಯು ಬನ್ನಂಜೆ, ಮಲ್ಪೆ, ದೊಡ್ಡಣಗುಡ್ಡೆ, ಮಣಿಪಾಲ, ನಗರದ ಪ್ರಮುಖ ಬೀದಿ ಗಳಲ್ಲಿ ಸಾಗಿ ಬಂದು ಚಿತ್ತರಂಜನ್ ಸರ್ಕಲ್‌ನಲ್ಲಿ ಸಮಾಪ್ತಿಗೊಂಡಿತು. ಈ ಸಂದರ್ಭ ನಡೆದ ಅಭಿನಂದನಾ ಸಮಾರಂಭದಲ್ಲಿ ವಿಜೇತ ನಗರಸಭಾ ಸದಸ್ಯರನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News