ಬ್ರಹ್ಮಾವರ: ಮದುವೆ ನಿಶ್ಚಯಗೊಂಡ ಯುವತಿ ನಾಪತ್ತೆ

Update: 2018-09-05 15:48 GMT

ಬ್ರಹ್ಮಾವರ, ಸೆ.5: ಮದುವೆ ನಿಶ್ಚಯಗೊಂಡ ಯುವತಿಯೊಬ್ಬಳು ನಾಪತ್ತೆ ಯಾಗಿರುವ ಘಟನೆ ಸೆ.4ರಂದು ಮಧ್ಯಾಹ್ನ ವೇಳೆ ನಡೂರು ಗ್ರಾಮದ ಬರದ ಕಲ್ಲು ಎಂಬಲ್ಲಿ ನಡೆದಿದೆ.

ರಂಗನಕೆರೆಯ ಗೇರುಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಬರದ ಕಲ್ಲು ನಿವಾಸಿ ಭಾಸ್ಕರ ಪೂಜಾರಿ ಎಂಬವರ ಮಗಳು ಶ್ವೇತಾ (19) ಎಂಬಾಕೆಗೆ 2 ತಿಂಗಳ ಹಿಂದೆ ಕೊಕ್ಕರ್ಣೆಯ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿದ್ದು, ಮನೆಯಲ್ಲಿದ್ದ ಆಕೆ ಮಧ್ಯಾಹ್ನ ವೇಳೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News