​ಮೊಬೈಲ್ ಸುಲಿಗೆ: ಬಾಲಕರಿಬ್ಬರು ವಶಕ್ಕೆ

Update: 2018-09-05 17:02 GMT

ಮಂಗಳೂರು, ಸೆ. 5: ನಗರದ ಹಲವು ಕಡೆಗಳಲ್ಲಿ ಮೊಬೈಲ್ ಫೋನ್ ಸುಲಿಗೆ ಮಾಡಿದ ಕಾನೂನಿನೊಡನೆ ಸಂಘರ್ಷಕ್ಕಿಳಿದ ಬಾಲಕರಿಬ್ಬರನ್ನು ಬೈಕಂಪಾಡಿ ಎಪಿಎಂಸಿ ಮುಖ್ಯ ಪ್ರವೇಶ ದ್ವಾರದ ಬಳಿ ಬುಧವಾರ ಬೆಳಗ್ಗೆ ಪಣಂಬೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಾಲಕರಿಂದ ಒಟ್ಟು 75 ಸಾವಿರ ರೂ. ಮೌಲ್ಯದ ವಿವಿಧ ಕಂಪೆನಿಯ ಮೊಬೈಲ್ ಫೋನ್‌ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ ಅಂದಾಜು 50 ಸಾವಿರ ರೂ. ಮೌಲ್ಯದ ದ್ವಿಚಕ್ರ ವಾಹವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ನಗರದ ವಿವಿಧೆಡೆ ಮೊಬೈಲ್ ಸುಲಿಗೆ ಮಾಡಿ ಬೈಕಂಪಾಡಿ ಎಪಿಎಂಸಿ ಮುಖ್ಯಪ್ರವೇಶ ದ್ವಾರದ ಬಳಿ ನಿಂತುಕೊಂಡು ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವುದಾಗಿ ಖಚಿತ ಮಾಹಿತಿ ಮೇರೆಗೆ ಠಾಣಾಧಿಕಾರಿ ಪಿಐ ರಫೀಕ್ ಕೆ.ಎಂ. ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಪರಾರಿಯಾಗಲು ಯತ್ನಿಸಿದ ಬಾಲಕರನ್ನು ವಶಕ್ಕೆ ಪಡೆಯಲಾಯಿತು.

ನಗರದ ಹಲವು ಠಾಣೆಗಳಲ್ಲಿ ಬಾಲಕರ ವಿರುದ್ಧ ಇಂತಹದೇ ಪ್ರಕರಣಗಳು ದಾಖಲಾಗಿ, ತನಿಖೆಯಲ್ಲಿವೆ. ಬಾಲಕರ ವಿರುದ್ಧ ಕಾನೂನು ಕ್ರಮ ಕೈಗೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಪತ್ತೆ ಕಾರ್ಯಾಚರಣೆಯನ್ನು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಡಿಸಿಪಿ ಉಮಾಪ್ರಶಾಂತ್ ಹಾಗೂ ಮಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಡಿ.ಎಸ್. ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ. ಹಾಗೂ ಪೊಲೀಸ್ ಉಪ-ನಿರೀಕ್ಷಕ ಉಮೇಶ್‌ಕುಮಾರ್ ಎಂ.ಎನ್., ಸಿಬ್ಬಂದಿ ಚಂದ್ರಹಾಸ ಆಳ್ವ, ರಾಧಾಕೃಷ್ಣ, ಇಸಾಕ್ ಮತ್ತು ಶರಣ್ ಕಾಳಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News