ಕೊಡಗು, ಕೇರಳ ಸಂತ್ರಸ್ತರಿಗೆ ಸಿಟಿ ಆಸ್ಪತ್ರೆ ನೆರವು

Update: 2018-09-06 15:15 GMT

ಪುತ್ತೂರು,ಸೆ.6: ಇತ್ತೀಚೆಗೆ ನಡೆದ ಪ್ರಾಕೃತಿಕ ವಿಕೋಪದಿಂದಾಗಿ ಅಪಾರ ಆಸ್ತಿ, ಪಾಸ್ತಿ ಮತ್ತು ಪ್ರಾಣ ಕಳೆದು ಕೊಂಡು ನೊಂದು ಕೊಂಡಿರುವ ಕೊಡಗು ಮತ್ತು ಕೇರಳದ ಸಂತ್ರಸ್ತರಿಗೆ ಗುರುವಾರ ಪುತ್ತೂರು ಸಿಟಿ ಆಸ್ಪತ್ರೆಯ ವತಿಯಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಆರ್ಥಿಕ ನೆರವು ನೀಡಲಾಯಿತು. 

ಪ್ರಧಾನಮಂತ್ರಿ ಪರಿಹಾರ ನಿಧಿಗೆ ರೂ. 1,20,000 ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗೆ ರೂ. 3,30,000ವನ್ನು ಪುತ್ತೂರು ಸಹಾಯಕ ಕಮೀಷನರ್ ಹೆಚ್.ಕೆ.ಕೃಷ್ಣಮೂರ್ತಿ ಅವರ ಮೂಲಕ ಹಸ್ತಾಂತರಿಸಲಾಯಿತು. 

ಪುತ್ತೂರು ಸಿಟಿ ಆಸ್ಪ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್, ಡಾ. ಗೋಪಿನಾಥ್ ಪೈ, ಡಾ. ಎಮ್.ಎಸ್ ಪ್ರಸಾದ್, ಡಾ. ಸತ್ಯಸುಂದರ ರಾವ್, ಡಾ. ಸೂರ್ಯನಾರಾಯಣ ರಾವ್, ಡಾ. ಎಂ.ಎಸ್.ಶೆಣೈ, ಡಾ. ಎಸ್.ಎಸ್.ರಾವ್, ಡಾ. ಶ್ರೀಹರಿ ರಾವ್, ಹೆಚ್.ಆರ್ ಮೆನೇಜರ್ ವಿಶ್ವಪ್ರಸಾದ್‍ರವರು ಚೆಕ್‍ನ್ನು ಸಹಾಯಕ ಕಮೀಷನರ್ ಗೆ ಹಸ್ತಾಂತರಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News