ಯೂಸುಫ್ ಹಾಜಿ ನಿಧನಕ್ಕೆ ತೀವ್ರ ಸಂತಾಪ

Update: 2018-09-06 15:30 GMT

ಮಂಗಳೂರು, ಸೆ.6: ಈಡನ್ ಗ್ಲೋಬಲ್ ಸ್ಕೂಲ್ ಬೆಳಂದೂರು ಆಡಳಿತ ಮಂಡಳಿ ಸದಸ್ಯ, ಸಮಾಜ ಸೇವಕ ಹಾಜಿ ಬಿ.ಪಿ. ಯೂಸುಫ್ ಬೈತಡ್ಕ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ಈಡನ್ ಶಾಲೆಯಿಂದ ಪ್ರಾರ್ಥನಾ ಸಭೆ ನಡೆಸಲಾಯಿತು.
ಪ್ರಾರ್ಥನಾ ಸಭೆಯಲ್ಲಿ ಸಂಚಾಲಕ ಮುಸ್ತಫಾ ಸಅದಿ ಶಿರ್ವ ನೇತೃತ್ವದಲ್ಲಿ ಮೃತರಿಗಾಗಿ ತಹ್ಲೀಲ್ ಸಮರ್ಪಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಹಾಜಿ ಬಿ.ಪಿ. ಅಬ್ದುಲ್ ಹಮೀದ್, ಕೋಶಾಧಿಕಾರಿ ಹಾಜಿ ಪುತ್ತುಬಾವ ಸವಣೂರು, ಸದಸ್ಯರಾದ ಹಾಜಿ ಉಸ್ಮಾನ್ ಪುತ್ತೂರು, ಬಶೀರ್ ಸವಣೂರು, ಅಬ್ದುಲ್ ರಝಾಕ್ ಕೆನರಾ, ಪ್ರಿನ್ಸಿಪಾಲ್ ಆಂಡ್ರೂಸ್ ಪಿ.ಎ. ಮೊದಲಾದವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಕೆ.ಎಂ.ಅಬೂಬಕರ್ ಸಿದ್ದೀಕ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News