ಭಾರತೀಯ ನೌಕದಳಕ್ಕೆ ನೇಮಕಾತಿ ಪ್ರಕ್ರಿಯೆ

Update: 2018-09-06 15:42 GMT

ಪುತ್ತೂರು,ಸೆ.6: ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯು ಆರಂಭಗೊಂಡಿದ್ದು, ಭಾರತೀಯ ನೌಕಾದಳವು "ವಿಶ್ವವಿದ್ಯಾಲಯ ಪ್ರವೇಶ ಪ್ರಕ್ರಿಯೆ-19" (UES-19) ರ ಅನ್ವಯ ಅರ್ಹ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆಯನ್ನು ನಡೆಸಿತು.

ಬುಧವಾರ ನಡೆದ ಈ ಪ್ರಕ್ರಿಯೆಯಲ್ಲಿ ಕಮಾಂಡರ್ ಎನ್.ಎಸ್. ಜಂವಾಲ್, ಕಮಾಂಡರ್ ಆರ್.ಕೆ.ಯಾದವ್, ಲೆಫ್ಟಿನೆಂಟ್ ಕಮಾಂಡರ್ ಸಿಲಾಬ್ ರೂಟ್ ಮತ್ತು ಲೆಫ್ಟಿನೆಂಟ್ ಸೈನೋ ವಿಲ್ಸನ್ ಅವರ ತಂಡ ಭಾಗವಹಿಸಿತು. 

ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು ಸಹಿತ ಒಟ್ಟು 5 ಕಾಲೇಜುಗಳ 104 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದರು. ಮೂರು ಸುತ್ತಿನಲ್ಲಿ ನಡೆದ ಈ ಪ್ರಕ್ರಿಯೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ಮುಂದೆ ನಡೆಯುವ ಎಸ್‍ಎಸ್‍ಬಿ ಸಂದರ್ಶನದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಗೋವಿಂದೇಗೌಡ ಅವರು ತಿಳಿಸಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News