ಮನ್‍ಶರ್ ಗ್ರೂಪ್: ಪ್ಯಾರಾಮೆಡಿಕಲ್ ಕಾಲೇಜ್ ಉದ್ಘಾಟನೆ

Update: 2018-09-06 17:32 GMT

ಬೆಳ್ತಂಗಡಿ,ಸೆ.6: ಮನ್‍ಶರ್ ಗ್ರೂಪ್ ಪ್ರಸ್ತುತ ವರ್ಷದಿಂದ ಆರಂಭಿಸಲಿರುವ ಮನ್-ಶರ್ ಪ್ಯಾರಾಮೆಡಿಕಲ್ ಕಾಲೇಜಿನ ಉದ್ಘಾಟನಾ ಸಮಾರಂಭ ಬೆಳ್ತಂಗಡಿ ರಕ್ಷಾ ಆರ್ಕೇಡ್‍ನಲ್ಲಿ ಗುರುವಾರ ನಡೆಯಿತು. 

ಪ್ಯಾರ ಮೆಡಿಕಲ್ ಕಾಲೇಜನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಉದ್ಘಾಟಿಸಿ ಶುಭ ಹಾರೈಸಿದರು. 

ಮನ್‍ಶರ್ ಗ್ರೂಪ್ ಅಧ್ಯಕ್ಷ ಸಯ್ಯದ್ ಉಮರ್ ಅಸ್ಸಖಾಫ್ ಮಾತನಾಡಿ, ಮನ್-ಶರ್ ಸಂಸ್ಥೆ ಸಮಾಜಕ್ಕೆ ಸೌಹಾರ್ದತೆಯ ಸಂದೇಶವನ್ನು ನೀಡುವ ಸಂಸ್ಥೆಯಾಗಿದ್ದು, ಎಲ್ಲಾ ಧರ್ಮದ ನಾಯಕರು, ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ನಮ್ಮ ಬೆಳವಣಿಗೆಯಲ್ಲಿ ಸಹಾಯ ಸಹಕಾರ ನೀಡಿದ್ದಾರೆ. ಎಲ್ಲರ ಹಾರೈಕೆಯೊಂದಿಗೆ ಸಂಸ್ಥೆ ಇಂದು ಕರ್ನಾಟಕದಾದ್ಯಂತ ಬೆಳೆದು ಬರಲು ಸಾಧ್ಯವಾಗಿದ್ದು ಮನ್-ಶರ್ ಗ್ರೂಪ್ ಕೇವಲ ಶಿಕ್ಷಣಕ್ಕೆ ಸೀಮಿತವಲ್ಲದೆ ಜೀವನ ಮೌಲ್ಯವನ್ನು ಕಲಿಸಿ ಸಮಾಜಕ್ಕೆ ಅರ್ಪಿಸುವ ಬಲುದೊಡ್ಡ ಗುರಿಯನ್ನು ಹೊಂದಿದೆ ಎಂದರು. 
 
ಪುತ್ತೂರು ಚೀಫ್ ಮೆಡಿಕಲ್ ಆಫೀಸರ್  ಡಾ. ರಘು, ಬೆಳ್ತಂಗಡಿ ಅಭಯ ಆಸ್ಪತ್ರೆ ಮ್ಯಾನೇಜಿಂಗ್ ಡೈರಕ್ಟರ್ ಡಾ. ಶ್ರೀಹರಿ, ಮಾತನಾಡಿ ಶುಭ ಹಾರೈಸಿದರು. ಮನ್‍ಶರ್ ಗ್ರೂಪ್ ಎಜು-ವಿಲೇಜ್ ಮ್ಯಾನೇಜಿಂಗ್ ಡೈರಕ್ಟರ್ ಶೇಖ್ ಬಾವಾ ಹಾಜಿ ಮಂಗಳೂರು ಮಾತನಾಡಿ,  ಮನ್‍ಶರ್ ಭವಿಷ್ಯದಲ್ಲಿ ಉದ್ದೇಶಿತ ಹೆಜ್ಜೆಗಳ ಕುರಿತು, ಮನ್‍ಶರ್ ಗ್ರೂಪ್ ಪ್ರಧಾನ ಕಾರ್ಯದರ್ಶಿ ಎಮ್. ಬಿ. ಎಮ್ ಸ್ವಾದಿಕ್ ಮಲೆಬೆಟ್ಟು ಮಾತನಾಡಿ ಮನ್-ಶರ್ ಗ್ರೂಪ್ ಸುಮಾರು 9 ವಿವಿಧ ಸಂಸ್ಥೆಗಳಲ್ಲಿ 1500 ವಿಧ್ಯಾರ್ಥಿಗಳನ್ನು ಹಾಗೂ 150 ಸಿಬ್ಬಂದಿಗಳನ್ನು ಒಳಗೊಂಡ ಸಂಸ್ಥೆಯ ಕುರಿತು ಮಾಹಿತಿ ನೀಡಿದರು. 

ಉದ್ಯಮಿ ರಮಾನಂದ ಸಾಲ್ಯಾನ್, ಉಡುಪಿ ಎಚ್.ಪಿ.ಆರ್ ಗ್ರೂಪ್ ಅಧ್ಯಕ್ಷ ಡಾ. ಹರಿಪ್ರಸಾದ್ ರೈ, ಮನ್-ಶರ್ ಗ್ರೂಪ್ ಡೈರಕ್ಟರ್ ಸಯ್ಯದ್ ಆಬಿದ್ ಅಸ್ಸಖಾಫ್, ಪ್ಯಾರಾಮೆಡಿಕಲ್ ಪ್ರಿನ್ಸಿಪಾಲ್ ಹೈದರ್ ಮರ್ದಾಲ, ಸಾರ್ವಜನಿಕ ಸಂಪರ್ಕಾಧಿಕಾರಿ ಖಲಂದರ್ ಪದ್ಮುಂಜ, ಸಿದ್ರಾ ಮ್ಯಾನೇಜರ್ ಅಬ್ದುಲ್ ಸಖಾಫಿ ನಿಂತಿಕಲ್, ನ್ಯೂಬಿ ಕೋರ್ಡಿನೇಟರ್ ನೌಫಲ್ ಕಕ್ಕಿಂಜೆ, ರಶೀದ್ ಕುಪ್ಪೆಟ್ಟಿ ಉಪಸ್ಥಿತರಿದ್ದರು. 

ಮನ್‍ಶರ್ ಅಕಾಡೆಮಿಕ್ ಡೈರಕ್ಟರ್ ವಸಂತ ಕುಮಾರ್ ನಿಟ್ಟೆ ಸ್ವಾಗತಿಸಿ, ವಂದಿಸಿದರು. ಸಿಧ್ರಾ ವಿದ್ಯಾರ್ಥಿ ಅಬ್ದುಲ್ ರಹಿಮಾನ್ ಶಫೀಹ್ ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News