ಮಂಗಳೂರು: ವಾಹನ ತಡೆದ ಪೊಲೀಸರ ವಿರುದ್ಧ ಬಿಜೆಪಿ ಶಾಸಕರಿಂದ ಮುಖ್ಯಮಂತ್ರಿಗೆ ದೂರು

Update: 2018-09-07 15:30 GMT

ಮಂಗಳೂರು, ಸೆ.7: ಮುಖ್ಯಮಂತ್ರಿ ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ದ.ಕ. ಜಿಪಂ ಸಭಾಂಗಣದಲ್ಲಿ ನಡೆದ ಸಭೆಗೆ ಆಗಮಿಸಿದ್ದ ಬಿಜೆಪಿ ಶಾಸಕರ ವಾಹನಗಳನ್ನು ಪೊಲೀಸರು ತಡೆ ಹಿಡಿದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ ಘಟನೆ ನಡೆದಿದೆ.

ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಜಿಪಂ ಸಭಾಂಗಣದ ವೇದಿಕೆ ಮೇಲೇರಿದ ಬಿಜೆಪಿಯ ಶಾಸಕರಾದ ಸಂಜೀವ ಮಠಂದೂರು, ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್ ಉಳೆಪ್ಪಾಡಿ ಮತ್ತಿತರರು ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುತ್ತಿದ್ದ ನಮ್ಮ ವಾಹನವನ್ನು ಪೊಲೀಸರು ಭದ್ರತೆಯ ನೆಪ ಹೇಳಿ ಆವರಣದೊಳಗೆ ಪ್ರವೇಶಿಸಲು ಬಿಡಲಿಲ್ಲ. ಶಾಸಕರು ಎಂದು ಪರಿಚಯಿಸಿಕೊಂಡರೂ ಕೂಡಾ ವಾಹನ ಗೇಟು ದಾಟಿ ಒಳ ಬರಲು ಬಿಡಲಿಲ್ಲ ಎಂದು ದೂರಿಕೊಂಡರಲ್ಲದೆ, ಪೊಲೀಸರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಸೂಚಿಸಿದರು.

ಶಾಸಕರ ಅಹವಾಲನ್ನು ಆಲಿಸಿದ ಮುಖ್ಯಮಂತ್ರಿ ಶಾಸಕರನ್ನು ಸಮಾಧಾನಪಡಿಸಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News