ಹೋರಿ ಕರು ಕಳವು: ಆರೋಪಿಯ ಬಂಧನ

Update: 2018-09-07 17:17 GMT

ಬೆಳ್ತಂಗಡಿ,ಸೆ.7: ರಸ್ತೆ ಬದಿಯಲ್ಲಿದ್ದ ಹೋರಿ ಕರು ಒಂದನ್ನು ಕಳವು ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಒರ್ವನನ್ನು ಬೆಳ್ತಂಗಡಿ ಪೋಲಿಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. 

ಇಂದಬೆಟ್ಟು ಗ್ರಾಮದ ಉಲ್ಲಾಸ ನಗರ ನಿವಾಸಿ ಚಿದಾನಂದ ಬಂಗಾಡಿ ಸಮೀಪ ರಸ್ತೆ ಬದಿಯಲ್ಲಿದ್ದ ಹೋರಿ ಕರುವನ್ನು ಕಳವು ಮಾಡಿ ಸಾಗಿಸುತ್ತಿದ್ದಾಗ ಕಿಲ್ಲೂರು ಕಡೆ ರೌಂಡ್ಸ್ ನಲ್ಲಿದ್ದ ಬೆಳ್ತಂಗಡಿ ಪಿಎಸ್‍ಐ ರವಿಯವರಿಗೆ ಖಚಿತ ಮಾಹಿತಿ ಮೇರೆಗೆ ಹೋರಿ ಕರುವನ್ನು ಕಿಲ್ಲೂರು ಕಡೆಗೆ ಸಾಗಿಸುತ್ತಿದ್ದ ಚಿದಾನಂದ ವಿಚಾರಿಸಿದಾಗ ಇಲ್ಲಿನ ಕುರುಬರ ಗುಡ್ಡೆ ನಿವಾಸಿ ಅಮ್ಮಿ ಯಾನೆ ಹಮೀದ್ ಜತೆ ಸೇರಿ ಕಳವು ಮಾಡಿರುವುದಾಗಿ ತಿಳಿಸಿದ್ದಾನೆ.

ಹಮೀದ್ ಎಂಬಾತ ತಪ್ಪಿಸಿಕೊಂಡಿದ್ದು, ಚಿದಾನಂದನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡು, ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News