ಸಿಎ ಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ

Update: 2018-09-07 17:30 GMT

ಉಡುಪಿ, ಸೆ.5: ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆಯ ವತಿಯಿಂದ ಬೋರ್ಡ್ ಆಫ್ ಸ್ಟಡಿಸ್ ಐಸಿಎಐ ಸಹಯೊಗದೊಂದಿಗೆ ಶಿಕ್ಷಕರ ದಿನಾಚರಣೆ ಉಡುಪಿ ಶಾಖೆ ಕುಂಜಿಬೆಟ್ಟುವಿನಲ್ಲಿ ಇತ್ತೀಚೆಗೆ ನಡೆಯಿತು.

ಕಾರ್ಯಕ್ರಮವನ್ನು ಮಾನವ ಹಕ್ಕುಗಳ ಫೌಂಡೇಶನ್ ಅಧ್ಯಕ್ಷ ಡಾ.ರವೀಂದ್ರ ನಾಥ ಶಾನಬೋಗ್ ಉದ್ಘಾಟಿಸಿ ಶುಭ ಹಾರೈಸಿದರು. ಸಿಎ ದೇವಾನಂದ ಮತ್ತು ಸಿಎ ಸುಶ್ಮೀತಾ ಎಸ್.ಪ್ರಭು ಗುರುಶಿಷ್ಯರ ಬಾಂದವ್ಯ ವಿದ್ಯಾರ್ಥಿ ಜೀವನದಲ್ಲಿ ಯಾವ ಪಾತ್ರವಹಿಸುತ್ತದೆ ಎಂಬ ವಿಷಯದ ಕುರಿತು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಗುರುವಿನ ಕುರಿತು ಪ್ರಬಂಧ ಹಾಗೂ ಕವಿತೆ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಉಡುಪಿ ಶಾಖೆಯ ವಿದ್ಯಾರ್ಥಿ ಸಂದ ಅಧ್ಯಕ್ಷ ಗಿರೀಶ ಪೈ ಬಿ. ಸ್ವಾಗತಿಸಿದರು. ಲೆಕ್ಕಪರಿಶೋಧಕ ಸಂಸ್ಥೆಯ ಅಧ್ಯಕ್ಷ ಕೆ.ಸುರೇಂದ್ರ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿ ಸಂಘದ ಸದಸ್ಯೆ ವಿಭಾ ದೇವದಾಸ ವಂದಿಸಿದರು. ಗೌತಮ ಕಿಣಿ ಹಾಗೊ ಅನಿರುದ್ಧ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News