ಕಿನ್ನಿಗೋಳಿ: ಶಿಕ್ಷಕರ ದಿನಾಚರಣೆ

Update: 2018-09-08 13:13 GMT

ಕಿನ್ನಿಗೋಳಿ, ಸೆ.8: ಅವಕಾಶವನ್ನು ಸದುಪಯೋಗಪಡಿಸಿಕೊಂಡು ಯಶಸ್ಸಿನ ಗುರಿ ತಲುಪುವುದೇ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಕೆಐಸಿಟಿ, ಎಂಸಿಟಿಸಿ ತಾಂತ್ರಿಕ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆ ನಿರ್ದೇಶಕ ಹರ್ಷದ್ ಎಂ.ಎ. ಅಭಿಪ್ರಾಯಪಟ್ಟರು.

ಕೆಐಸಿಟಿ, ಎಂಸಿಟಿಸಿ ತಾಂತ್ರಿಕ ಹಾಗೂ ಕಂಪ್ಯೂಟರ್ ತರಬೇತಿ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲ ನವೀನ್ ವೈ. ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆಯಲ್ಲಿ ರೋಹಿತ್, ಸಂಸ್ಥೆಯ ಅಧ್ಯಾಪಕರಾದ ವಿಕಾಸ್, ದಾಕ್ಷಾಯಿಣಿ, ಮೀನಾಕ್ಷಿ, ಸುರೇಖಾ, ಪ್ರೀತಿ ಉಪಸ್ಥಿತರಿದ್ದರು.

ರಾಘವೇಂದ್ರ ಸ್ವಾಗತಿಸಿದರು, ಹರ್ಷಿತಾ ವಂದಿಸಿದರು. ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News