ರಸ್ತೆ ಅಪಘಾತ: ಸ್ಕೂಟರ್ ಚಾಲಕ ಮೃತ್ಯು
Update: 2018-09-12 16:22 GMT
ಉಡುಪಿ, ಸೆ.12: ಕಲ್ಯಾಣಪುರ ಸಂತೆಕಟ್ಟೆ ಬಳಿ ಬುಧವಾರ ಸಂಜೆ ಕಂಟೈನರ್ ಲಾರಿ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತರನ್ನು ಕೆ.ಜಿ.ರೋಡ್ನ ನಿವಾಸಿ ಗಂಗಾಧರ ಕಾಂಚನ್ (60) ಎಂದು ಗುರುತಿಸಲಾಗಿದೆ. ಗಂಗಾಧರ ಕಾಂಚನ್ ತನ್ನ ದ್ವಿಚಕ್ರ ವಾಹನದಲ್ಲಿ ಕೆ.ಜಿ. ರೋಡ್ನಿಂದ ಉಡುಪಿಗೆ ಕಡೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಕಂಟೈನರ್ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟರ್ ಸಮೇತರಾಗಿ ರಸ್ತೆಗೆ ಬಿದ್ದ ಕಾಂಚನ್ರ ಮೇಲೆ ಹಿಂದಿನಿಂದ ಬಂದ ಲಾರಿ ಹರಿದು ಹೋಗಿದೆ. ಘಟನೆಯಿಂದ ಗಂಭೀರ ಗಾಯಗೊಂಡ ಗಂಗಾಧರ ಕಾಂಚನ್ ಸ್ಥಳದಲ್ಲೇ ಮೃತರಾಗಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.