ಪಿಲಿಕುಳ ದೋಣಿ ವಿಹಾರ ಕೇಂದ್ರದಲ್ಲಿ ಕಳವು
Update: 2018-09-12 16:44 GMT
ಮಂಗಳೂರು, ಸೆ.12: ನಗರದ ಮೂಡುಶೆಡ್ಡೆ ಸಮೀಪದ ಪಿಲಿಕುಳ ಶಿವರಾಮ ಕಾರಂತ ನಿಸರ್ಗಧಾಮದ ದೋಣಿ ವಿಹಾರ ಕೇಂದ್ರದಿಂದ ಸುಮಾರು 21,600ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.10ರಂದು ಸಂಜೆ 3.30 ರಿಂದ 4.30ರ ಅವಧಿಯಲ್ಲಿ ದೋಣಿ ವಿಹಾರ ಕೇಂದ್ರದಲ್ಲಿ ಅಳವಡಿಸಲಾದ ಪೈಪ್, ನೀರು ಮೇಲೆತ್ತುವ ಚೈನ್ ಪುಲ್ಲಿಂಗ್ ಪೈಪ್, ನೀರು ಸರಬರಾಜಿನ ಕೇಬಲ್ ಸೇರಿದಂತೆ ಸುಮಾರು 21,600 ರೂ. ಮೌಲ್ಯದ ಸೊತ್ತುಗಳನ್ನು ಕಳ್ಳರು ಕಳವುಗೈದಿರುವುದಾಗಿ ಪಿಲಿಕುಳದ ಭದ್ರತಾ ಸಿಬ್ಬಂದಿ ದಯಾಸಾಗರ್ ದೂರು ನೀಡಿದ್ದಾರೆ.
ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ: ಕಳ್ಳರು ಕಳವು ಮಾಡಿದ ಬಳಿಕ ಪರಾರಿಯಾಗಿರುವ ದೃಶ್ಯ ಪಿಲಿಕುಳ ಅಮ್ಯೂಸ್ಮೆಂಟ್ ಪಾರ್ಕ್ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಮಾಹಿತಿ ಲಭಿಸಿದ್ದು ಪೊಲೀಸರು ಅವರಿಗೆ ಶೋಧ ನಡೆಸುತ್ತಿದ್ದಾರೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.