ಕಬಡ್ಡಿ: ಮನ್-ಶರ್ ಸ್ಕೂಲ್ ವಿದ್ಯಾರ್ಥಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆ

Update: 2018-09-13 05:23 GMT

ಗೇರುಕಟ್ಟೆ, ಸೆ. 13: ಮನ್-ಶರ್ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿ ಮುಹಮ್ಮದ್ ಹಾಶಿರ್ ಉಚ್ಚಿಲಬೋವಿ ವಿದ್ಯಾಸಂಸ್ಥೆ ಸೋಮೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ಭಾಗಿಯಾಗಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಉತ್ತಮ ಕ್ಯಾಚರ್ ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಮನ್-ಶರ್ ಸ್ಕೂಲ್ ದೈಹಿಕ ಶಿಕ್ಷಕ ಮುಹಮ್ಮದ್ ಆಶಿಕ್ ಮಡಂತ್ಯಾರ್ ರಿಂದ  ತರಬೇತಿ ಪಡೆದಿದ್ದು, ಮುಹಮ್ಮದ್ ಹಾಶಿರ್ ದಿ. ಇಮ್ತಿಯಾಝ್ ಹಾಗೂ ಆಮಿನಮ್ಮ ಮದ್ದಡ್ಕ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News