ನೂತನ ಕೌನ್ಸಿಲರ್ ಮುಶ್ತಾಕ್ ಪಟ್ಲರಿಗೆ ಸೋಲಿಡಾರಿಟಿಯಿಂದ ಸನ್ಮಾನ

Update: 2018-09-13 06:08 GMT

ಮಂಗಳೂರು, ಸೆ. 13: ಇತ್ತೀಚೆಗೆ ನಡೆದ ಉಳ್ಳಾಲ ನಗರಸಭಾ ಚುನಾವಣೆಯಲ್ಲಿ ಬಬ್ಬುಕಟ್ಟೆ ವಾರ್ಡ್ ನಿಂದ ಸ್ಪರ್ಧಿಸಿ, ಕೌನ್ಸಿಲರ್ ಆಗಿ ಮೊದಲ ಬಾರಿಗೆ ಆಯ್ಕೆಯಾದ ಮುಶ್ತಾಕ್ ಪಟ್ಲ ಅವರಿಗೆ ಸೋಲಿಡಾರಿಟಿ ಯೂತ್ ಮೂವ್ ಮೆಂಟ್ ಮಂಗಳೂರು ಶಾಖೆ ವತಿಯಿಂದ ನಗರದ ಹಿದಾಯತ್ ಸೆಂಟರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಯೆನೆಪೊಯ ವಿವಿಯ  ಇಸ್ಲಾಮೀ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಡಾ. ಜಾವೆದ್ ಜಮೀಲ್, ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಅಧ್ಯಕ್ಷ ಮುಹಮ್ಮದ್ ಕುಂಞಿ, ಸೋಲಿಡಾರಿಟಿ ಯೂತ್ ಮೂಮೆಂಟ್ ನ ರಾಜ್ಯಾಧ್ಯಕ್ಷ ಶಬೀರ್ ಅಹ್ಮದ್, ಮಂಗಳೂರು ನಗರ ಸಂಚಾಲಕ ಫರ್ವೇಝ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News