ಕುಂದಾಪುರ: ತಾಲೂಕಿನಲ್ಲಿ ಮದ್ಯ ಮಾರಾಟ ನಿಷೇಧ

Update: 2018-09-14 15:41 GMT

ಉಡುಪಿ, ಸೆ.14: ಚೌತಿ ಹಬ್ಬದ ಹಿನ್ನೆಲೆಯಲ್ಲಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಕುಂದಾಪುರ ತಾಲೂಕಿನ ಈ ಕೆಳಗಿನ ಪ್ರದೇಶಗಳಲ್ಲಿ ಮಧ್ಯ ಮಾರಾಟವ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಕುಂದಾಪುರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕುಂದಾಪುರ ಕಸಬಾ, ವಡೇರಹೋಬಳಿ, ಹಂಗಳೂರು, ಕೋಟೇಶ್ವರ, ಬೀಜಾಡಿ, ಗೋಪಾಡಿ, ಆನಗಳ್ಳಿ, ತಲ್ಲೂರು, ಹೆಮ್ಮಾಡಿ, ಉಪ್ಪಿನಕುದ್ರು, ಕೋಣಿ, ಕುಂಬಾಶಿ, ವಕ್ವಾಡಿ ಯಲ್ಲಿ ಸೆ.15ರಂದು ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ಹಾಗೂ ಸೆ.17 ರಂದು ಬೆಳಗ್ಗೆ 6ರಿಂದ 18ರ ಮಧ್ಯರಾತ್ರಿ 12ಗಂಟೆಯವರೆಗೆ.

ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಗ್ರಾಮಗಳಾದ ಕಾವ್ರಾಡಿ, ಕುರ್ಕುಂಜೆ, ಕಾಳಾವರ, ಬಸ್ರೂರು, ಬಳ್ಕೂರು, ಕುಂದಾವರ, ಕನ್ಯಾನ, ಹಟ್ಟಿಯಂಗಡಿಯಲ್ಲಿ ಸೆ.13ರ ಬೆಳಗ್ಗೆ 6ರಿಂದ ಸೆ.15ರ ಬೆಳಗ್ಗೆ 6 ರವರೆಗೆ. ಶಂಕರನಾರಾಯಣ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿ ಸೆ.13ರಂದು ಬೆಳಗ್ಗೆ 6ರಿಂದ ಸೆ.16ರ ಬೆಳಗ್ಗೆ 6 ಗಂಟೆಯವರೆಗೆ, ಶಂಕರನಾರಾಯಣದಲ್ಲಿ ಸೆ.13 ರಂದು ಬೆಳಗ್ಗೆ 6ರಿಂದ 15ರ ಬೆಳಗ್ಗೆ 6 ಗಂಟೆವರೆಗೆ, ಅಂಪಾರು ಗ್ರಾಮ ದಲ್ಲಿ ಸೆ.13ರಂದು ಬೆಳಗ್ಗೆ 6ರಿಂದ 24 ಗಂಟೆಗಳ ಕಾಲ ಮತ್ತು 15ರ ಬೆಳಗ್ಗೆ 6ರಿಂದ ಸೆ.16ರ ಬೆಳಗ್ಗೆ 6ರವರೆಗೆ.

ಆಜ್ರಿ, ಬೆಳ್ವೆ, ಹಾಲಾಡಿ ವ್ಯಾಪ್ತಿಯಲ್ಲಿ ಸೆ.14ರಂದು ಬೆಳಗ್ಗೆ 6ರಿಂದ 15ರ ಬೆಳಗ್ಗೆ 6ರವರೆಗೆ, ಆಜ್ರಿ ವ್ಯಾಪ್ತಿಯಲ್ಲಿ ಸೆ.14ರಂದು ಬೆಳಗ್ಗೆ 6ರಿಂದ 16ರ ಬೆಳಗ್ಗೆ 6ಗಂಟೆವರೆಗೆ, ಗೋಳಿಯಂಗಡಿ ವ್ಯಾಪ್ತಿಯಲ್ಲಿ ಸೆ.15ರ ಬೆಳಗ್ಗೆ 6ರಿಂದ 16ರ ಬೆಳಗ್ಗೆ 6 ರವರೆಗೆ ಹಾಗೂ ಸೆ.17ರಂದು ಬೆಳಗ್ಗೆ 6ರಿಂದ 18ರ ಬೆಳಗ್ಗೆ 6 ರವರೆಗೆ.

ಗಂಗೊಳ್ಳಿ ಠಾಣಾ ವ್ಯಾಪ್ತಿಯ ಗಂಗೊಳ್ಳಿ, ಗುಜ್ಜಾಡಿ, ಹೊಸಾಡು, ತ್ರಾಸಿ, ಆಲೂರು, ಮರವಂತೆ, ನಾಡಾ ಗ್ರಾಮಗಳಲ್ಲಿ ಸೆ.16ರಂದು ಬೆಳಗ್ಗೆ 6ರಿಂದ 18ರ ಬೆಳಗ್ಗೆ 6ರವರೆಗೆ.

ಕೊಲ್ಲೂರು ಠಾಣಾ ವ್ಯಾಪ್ತಿಯ ಜಡ್ಕಲ್, ವಂಡ್ಸೆ, ಚಿತ್ತೂರು ಗ್ರಾಮಗಳಲ್ಲಿ ಸೆ.13ರ ಬೆಳಗ್ಗೆ 6ರಿಂದ 15ರ ಬೆಳಗ್ಗೆ 6 ರವರೆಗೆ ಹಾಗೂ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು, ಬೈಂದೂರು, ಯೆಡ್ತರೆ, ಹೆರೂರು, ಉಪ್ಪುಂದ, ನಾವುಂದ, ಕಿರಿಮಂಜೇಶ್ವರ ವ್ಯಾಪ್ತಿಯಲ್ಲಿ ಸೆ.13ರಂದು ಬೆಳಗ್ಗೆ 6ರಿಂದ 16ರ ಬೆಳಗ್ಗೆ 6:00ರವರೆಗೆ ಮದ್ಯ ಮಾರಾಟದ ಸನ್ನದುಗಳನ್ನು ಹೊಂದಿರುವ ಬಾರ್ ರೆಸ್ಟೋರೆಂಟ್ ಮತ್ತು ವೈನ್‌ಶಾಪ್‌ಗಳನ್ನು ಮುಚ್ಚಲು ಆದೇಶಿಸಲಾಗಿದೆ.

 ಈ ಹಿನ್ನೆಲೆಯಲ್ಲಿ ಕುಂದಾಪುರ, ಕುಂದಾಪುರ ಗ್ರಾಮಾಂತರ, ಶಂಕರ ನಾರಾಯಣ, ಗಂಗೊಳ್ಳಿ, ಕೊಲ್ಲೂರು, ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಣದಿನ ಎಂದು ಘೋಷಿಸಿ ಮಧ್ಯ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News