ಕಟಪಾಡಿ: ಜಿಲ್ಲಾಮಟ್ಟದ ಭಕ್ತಿ ಸಂಗೀತ ಸ್ಪರ್ಧೆ ಫಲಿತಾಂಶ
ಉಡುಪಿ, ಸೆ.15: ಜೇಸಿಐ ಕಟಪಾಡಿ ವತಿಯಿಂದ ಕಟಪಾಡಿಯ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗಾಗಿ ನಡೆದ ಉಡುಪಿ ಜಿಲ್ಲಾ ಮಟ್ಟದ ಭಕ್ತಿ ಸಂಗೀತ ಸ್ಪರ್ಧೆಯ ಫಲಿತಾಂಶ ಈ ಕೆಳಗಿನಂತಿದೆ.
ಕಿರಿಯ ಪ್ರಾಥಮಿಕ ವಿಭಾಗ: ಉಡುಪಿ ಮುಕುಂದಕೃಪಾ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಬಿ.ಬಲ್ಲಾಳ್ (ಪ್ರಥಮ), ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿಯ ಪ್ರತ್ಯೂಷ (ದ್ವಿತೀಯ), ಎಸ್ವಿಎಸ್ ಹಿರಿಯ ಪ್ರಾಥಮಿಕ ಶಾಲೆ ಕಟಪಾಡಿಯ ಪ್ರಣತಿ ರಾವ್ (ತೃತೀಯ),ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ಪ್ರಭವ್ ಉಪಾಧ್ಯ ಮತ್ತು ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿಯ ನಿಕಿತ (ಸಮಾಧಾನಕರ ಬಹುಮಾನ).
ಹಿರಿಯ ಪ್ರಾಥಮಿಕ ವಿಭಾಗ: ಸರಕಾರಿ ಹಿಪ್ರಾಶಾಲೆ ಎಲಿಯಾಳ ಕಾರ್ಕಳದ ಧೀರಜ್(ಪ್ರಥಮ), ಎಸ್ವಿಎಚ್ಹಿಪ್ರಾ ಶಾಲೆ ಇನ್ನಂಜೆಯ ಪ್ರಣಾದ್ ರಾವ್ (ದ್ವಿತೀಯ), ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ಕಟಪಾಡಿಯ ಅನುಜ್ಞಾ ಭಟ್ (ತೃತೀಯ), ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿಯ ಮನೀಷ್ ಡಿ.ರಾವ್ ಹಾಗೂ ಜಿ.ಎಂ.ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಬ್ರಹ್ಮಾವರದ ಪ್ರತಿಮಾ ಕೆ.ಪಿ.(ಸಮಾಧಾನಕರ ಬಹುಮಾನ).
ಪ್ರೌಢ ಶಾಲಾ ವಿಭಾಗ: ಗ್ರೀನ್ ಪಾರ್ಕ್ ಸೆಂಟ್ರಲ್ ಸ್ಕೂಲ್ ಹಿರಿಯಡಕದ ರಕ್ಷಿತ ಆರ್.ಭಟ್ (ಪ್ರಥಮ), ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ ದ ಸುಪ್ರೀತಾ ಮಣಿಪಾಲ್ (ದ್ವಿತೀಯ), ಸರಕಾರಿ ಪ್ರೌಢ ಶಾಲೆ ಅಜ್ಜರಕಾಡು ಉಡುಪಿಯ ದೀಕ್ಷಿತಾ (ತೃತೀಯ), ಸರಕಾರಿ ಪ್ರೌಢ ಶಾಲೆ ಒಳಕಾಡುನ ಭೂಮಿಕಾ ಮತ್ತು ಆನಂದತೀರ್ಥ ವಿದ್ಯಾಲಯ ಕುಂಜಾರುಗಿರಿಯ ಕಾವೇರಿ (ಸಮಾಧಾನಕರ ಬಹುಮಾನ).
ಗಣೇಶ ಚತುರ್ಥಿಯಂದು ಕಟಪಾಡಿಯ ಗಣೇಶೋತ್ಸವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ತೀರ್ಪುಗಾರರಾಗಿ ಸಂಗೀತ ತಜ್ಞರಾದ ಭವ್ಯ ಉಡುಪಿ ಹಾಗೂ ಹೇಮಲತಾ ಎ.ರಾವ್ ನಿಟ್ಟೂರು ಭಾಗವಹಿಸಿದ್ದರು.