ಮುದರಂಗಡಿ ಗ್ರಾಪಂಗೆ ಧೃಢೀಕರಣ ಪತ್ರ ಹಸ್ತಾಂತರ

Update: 2018-09-15 15:20 GMT

ಪಡುಬಿದ್ರೆ, ಸೆ.15: ಅದಾನಿ ಯುಪಿಸಿಎಲ್ ಸಂಸ್ಥೆಯು ಸಿಎಸ್‌ಆರ್ ಅನುದಾನಡಿಯಲ್ಲಿ ಮುದರಂಗಡಿ ಗ್ರಾಪಂನ 2018-19ನೇ ವಾರ್ಷಿಕ ಸಾಲಿಗೆ ಘೋಷಿಸಿದ 1.55 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ನಿರ್ವಹಿಸುವುದರ ಬಗ್ಗೆ ಧೃಢೀಕರಣ ಪತ್ರವನ್ನು ಇಂದು ಗ್ರಾಪಂ ಸಭಾಂಗಣದಲ್ಲಿ ನೀಡಲಾಯಿತು.

ಗ್ರಾಪಂ ಅಧ್ಯಕ್ಷ ಡೇವಿಡ್ ಡಿಸೋಜ ಯುಪಿಸಿಎಲ್ ಕಂಪನಿಯ ಕಾರ್ಯ ನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವರಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಒಳ ಗೊಂಡಿದ್ದ ಪಟ್ಟಿಯನ್ನು ಕ್ರಿಯಾಯೋಜನೆಯ ರೀತಿಯಲ್ಲಿ ಹಸ್ತಾಂತರಿಸಿದರು. ಇದೇ ವೇಳೆ ಅದಾನಿ ಯುಪಿಸಿಎಲ್ ಸಿಎಸ್‌ಆರ್ ಅನುದಾನಡಿಯಲ್ಲಿ ಕಾಮ ಗಾರಿ ನಿರ್ವಹಿಸುವ ಕುರಿತು ಸೂಚಿಸುವ ಧೃಢೀಕರಣ ಪತ್ರವನ್ನು ಕಿಶೋರ್ ಆಳ್ವ ಮುದರಂಗಡಿ ಗ್ರಾಪಂಗೆ ನೀಡಿದರು.

ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅನಿಲ್ ಕುಮಾರ್, ಸದಸ್ಯರಾದ ಸುಕುಮಾರ್ ಶೆಟ್ಟಿ, ಶೋಭಾ ೆರ್ನಾಂಡೀಸ್, ಯುಪಿಸಿಎಲ್ ಸಂಸ್ಥೆಯ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್. ಜೇರೆ, ಅದಾನಿ ೌಂಡೇಷನ್‌ನ ಸದಸ್ಯರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News