ರಾಷ್ಟ್ರಮಟ್ಟದ ಸೀನಿಯರ್ ಭರತನಾಟ್ಯ ಸ್ಪರ್ಧೆ ಉದ್ಘಾಟನೆ

Update: 2018-09-16 12:48 GMT

ಉಡುಪಿ, ಸೆ.16: ಹೆಜ್ಜೆಗೆಜ್ಜೆ ಉಡುಪಿ ಮಣಿಪಾಲ ಇದರ ರಜತ ಮಹೋತ್ಸವದ ಪ್ರಯುಕ್ತ ಪರ್ಯಾಯ ಪಲಿಮಾರು ಮಠ ಉಡುಪಿ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ರಾಷ್ಟ್ರಮಟ್ಟದ ಸೀನಿಯರ್ ಭರತನಾಟ್ಯ(16ರಿಂದ 25 ವರ್ಷ ವಯೋಮಿತಿ) ಸ್ಪರ್ಧೆಯನ್ನು ರವಿವಾರ ರಾಜಾಂಗಣದಲ್ಲಿ ಏರ್ಪ ಡಿಸಲಾಗಿತ್ತು.

ಸ್ಪರ್ಧೆಯನ್ನು ಹಿರಿಯ ನೃತ್ಯ ಗುರು ವಿದುಷಿ ಪ್ರತಿಭಾ ಎಂ.ಎಲ್.ಸಾಮಗ ಉದ್ಘಾಟಿಸಿ ಶುಭ ಹಾರೈಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಡಾ.ಶ್ರೀವಿದ್ಯಾ ಮುರಳೀಧರ್ ಮಂಗಳೂರು, ವಿದ್ವಾನ್ ಸಾಗರ್ ಟಿ.ಎಸ್. ತುಮುಕೂರ್ ಹಾಗೂ ವಿದ್ವಾನ್ ಪ್ರಮೋದ್ ಉಳ್ಳಾಲ್, ಹೆಜ್ಜೆ ಗೆಜ್ಜೆಯ ಡಾ.ರಾುಕೃಷ್ಣ ಹೆಗಡೆ ಉಪಸ್ಥಿತರಿದ್ದರು.

ಹೆಜ್ಜೆ ಗೆಜ್ಜೆ ಸಂಸ್ಥೆಯ ನಿರ್ದೇಶಕಿ ಯಶ ರಾಮಕೃಷ್ಣ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಒಟ್ಟು 33 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News