ಬೆಳ್ತಂಗಡಿ: ಸ್ನಾನಕ್ಕಾಗಿ ನದಿಗೆ ಇಳಿದ ಯುವಕ ನೀರು ಪಾಲು

Update: 2018-09-16 15:14 GMT

ಬೆಳ್ತಂಗಡಿ, ಸೆ. 16: ವೇಣೂರು ಠಾಣೆ ವ್ಯಾಪ್ತಿಯ ಬಡಕೋಡಿ ಗ್ರಾಮದ ನಿವಾಸಿ ಯುವಕನೋರ್ವ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ನೀರು ಪಾಲಾದ ಘಟನೆ ರವಿವಾರ ಸಂಜೆ ನಡೆದಿದೆ.

ಮೃತ ಯುವಕ ಬಡಕೋಡಿ ನೂಯಿ ಮನೆ ನಿವಾಸಿ ಸುಧಾಕರ ಪೂಜಾರಿ ಎಂಬವರ ಪುತ್ರ ಮನೋಜ್(24) ಎಂದು ಗುರುತಿಸಲಾಗಿದೆ.

ಈತ ಇಂದು ಮಧ್ಯಾಹ್ನ  ತನ್ನ ಗೆಳೆಯ ಮಂಜುನಾಥ ಎಂಬಾತನೊಂದಿಗೆ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಈ ವೇಳೆಗೆ ಮಂಜುನಾಥ ನೀರಿನ ಸೆಳೆತಕ್ಕೆ ಸಿಲುಕಿದ್ದು, ಆತನನ್ನು ರಕ್ಷಿಸಲೆಂದು ಪ್ರಯತ್ನಿಸಿದ ಮನೋಜ್  ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಈ ವೇಳೆ ನದಿ ಬದಿಯ ಪೊದೆಯಲ್ಲಿ ಸಿಲುಕಿಕೊಂಡ ಮಂಜುನಾಥ ಬೊಬ್ಬೆ ಹೊಡೆದಿದ್ದು, ಈ ವೇಳೆಗೆ ಸ್ಥಳೀಯರು ಓಡಿ ಬಂದು ಮಂಜುನಾಥನನ್ನು ರಕ್ಷಿಸಿದ್ದು, ಆದರೆ ಈ ವೇಳೆಗೆ ಮನೋಜ್ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ವೇಣೂರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News