ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ಕಾಂಗ್ರೆಸ್ ದೇಶಕ್ಕೆ ಮಹಾನ್ ವ್ಯಕ್ತಿತ್ವಗಳನ್ನು ನೀಡಿದೆ : ಭಾಗವತ್

Update: 2018-09-17 14:31 GMT

ಹೊಸದಿಲ್ಲಿ,ಸೆ. 17 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ "ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಮಹತ್ವದ ಪಾತ್ರ ವಹಿಸಿದೆ ಹಾಗು ದೇಶಕ್ಕೆ ಮಹಾನ್ ವ್ಯಕ್ತಿತ್ವಗಳನ್ನು ನೀಡಿದೆ" ಎಂದು ಹೇಳಿದ್ದಾರೆ. 

"ಭವಿಷ್ಯದ ಭಾರತ್ - ಆರೆಸ್ಸೆಸ್ ದೃಷ್ಟಿಕೋನ " ಎಂಬ ವಿಷಯದಲ್ಲಿ ಆರೆಸ್ಸೆಸ್ ನ ಮೂರು ದಿನಗಳ ಸಮಾವೇಶದ ಮೊದಲ ದಿನ ಮಾತನಾಡುತ್ತಾ ಭಾಗವತ್ ಹೀಗೆ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ " ಆರೆಸ್ಸೆಸ್ ಮಾಡಿರುವ ಕೆಲಸವನ್ನು ಹೋಲಿಸಲು ಸಾಧ್ಯವಿಲ್ಲ " ಎಂದೂ ಭಗವತ್ ಹೇಳಿದ್ದಾರೆ. ಸಮಾವೇಶಕ್ಕೆ ಕಾಂಗ್ರೆಸ್ ಸಹಿತ ಎಲ್ಲ ವಿಪಕ್ಷಗಳಿಗೂ ಅಹ್ವಾನ ನೀಡಲಾಗಿತ್ತಾದರೂ ಹೆಚ್ಚಿನ ಎಲ್ಲ ವಿಪಕ್ಷಗಳು ಆಹ್ವಾನವನ್ನು ತಿರಸ್ಕರಿಸಿವೆ. 

ಸಾಮಾನ್ಯವಾಗಿ ಸರಕಾರದ ಪ್ರಮುಖ ಕಾರ್ಯಕ್ರಮಗಳು ನಡೆಯುವ ದೆಹಲಿಯ ವಿಜ್ಞಾನ ಭವನದಲ್ಲಿ ಆರೆಸ್ಸೆಸ್ ನ ಈ ಸಮಾವೇಶ ನಡೆಯುತ್ತಿದೆ.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News