ಹೆಬ್ರಿ: ಕಾಂಗ್ರೆಸ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ
Update: 2018-09-17 14:33 GMT
ಹೆಬ್ರಿ, ಸೆ. 17: ಕಾಂಗ್ರೆಸ್ ಕಚೇರಿಯಲ್ಲಿ ವಿಶ್ವಕರ್ಮ ಜಯಂತಿ ಹೆಬ್ರಿ, ಸೆ.17: ಹೆಬ್ರಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ಕಾರ್ಕಳದ ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ನೇತೃತ್ವದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ಗೋಪಾಲ ಭಂಡಾರಿ ದೀಪ ಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಜಿಪಂ ಮಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಹೆಬ್ರಿ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ತಣ್ಣೀರು ಸುಬ್ರಾಯ ಆಚಾರ್ಯ, ವರಂಗ ಲಕ್ಷ್ಮಣ್ ಆಚಾರ್, ಶಂಕರ ಶೇರಿಗಾರ್, ಎಚ್.ಶೀನ ಪೂಜಾರಿ, ಸುಮಿತ್ರಾ ಹೆಗ್ಡೆ, ನರೇಂದ್ರ ನಾಯಕ್, ಸಂತೋಷ ನಾಯಕ್, ಕರುಣಾಕರ ಭಂಡಾರಿ, ಗಾಯತ್ರಿ ಆಚಾರ್ಯ, ಸಾಧು ಮಡಿವಾಳ್, ಎಚ್.ಜನಾರ್ಧನ್, ಸುಂದರ ಶಿರೂರು ಮುಂತಾದವರು ಉಪಸ್ಥಿತರಿದ್ದರು.