ಭಟ್ಕಳ: ದೈಹಿಕ ಶಿಕ್ಷಣ ಪರಿವೀಕ್ಷ ಶ್ರೀಕಾಂತ್ ನಾಯಕರಿಗೆ ಸನ್ಮಾನ
Update: 2018-09-17 15:35 GMT
ಭಟ್ಕಳ, ಸೆ. 17: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಕಾಂತ್ ನಾಯಕರಿಗೆ ಸೋಮವಾರ ಬೆಳಕೆ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ಜರಗಿದ ತಾಲೂಕು ಮಟ್ಟದ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ನಾಯ್ಕ, ಕಾರ್ಯದರ್ಶಿ ಪ್ರಕಾಶ ಶೇಟ್ ಶಿರಾಲಿ, ಮಾಜಿ ಅಧ್ಯಕ್ಷ ಎಂ.ಬಿ.ನಾಯ್ಕ, ಗೋಪಾಲ್ ನಾಯ್ಕ, ಮಹೇಶ್ ನಾಯ್ಕ, ಶೋಭಾ ನಾಯ್, ಸುಜಾತ ಗೌಡ, ಫಾರೂಖ್ ಘನಿ, ವಾಸುದೇವ ಪುಜಾರಿ, ವಸಂತ್ ಲೂಪೀಸ್ತಿತರರು ಉಪಸ್ಥಿತರಿದ್ದರು.