ರಿಕ್ಷಾ ಢಿಕ್ಕಿ: ಪಾದಚಾರಿ ಮೃತ್ಯು

Update: 2018-09-17 16:47 GMT

ಉಡುಪಿ, ಸೆ. 17:  ಕಲ್ಸಂಕ ಬಳಿ ರಿಕ್ಷಾವೊಂದು ಢಿಕ್ಕಿ ಹೊಡೆದ ಪರಿಣಾಮ ಬಸ್‍ಗಾಗಿ ಕಾಯುತ್ತಿದ್ದ ವೃದ್ಧರೊಬ್ಬರು ಮೃತಪಟ್ಟ ಬಗ್ಗೆ ಸೋಮವಾರ  ವರದಿಯಾಗಿದೆ.

ಮೃತರನ್ನು ಜಡ್ಡಿನ ಮನೆ ನಿವಾಸಿ ಗೋವಿಂದ ಹೆಗ್ಡೆ ಕುಕ್ಕೆಹಳ್ಳಿ (80) ಎಂದು ಗುರುತಿಸಲಾಗಿದೆ.

ಇವರು ಬಸ್‍ಗಾಗಿ ರಸ್ತೆ ಬದಿ‌ ನಿಂತಿದ್ದಾಗ ಸಿಟಿ ಬಸ್‍ ನಿಲ್ದಾಣ ಕಡೆಯಿಂದ ಬಂದ ರಿಕ್ಷಾ ಢಿಕ್ಕಿ ಹೊಡೆಯಿತೆನ್ನಲಾಗಿದೆ.  ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೇ ಮಣಿಪಾಲ  ಆಸ್ಪತ್ರೆಯಲ್ಲಿ ಮೃತಪಟ್ಟರು.

ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಈ ಬಗ್ಗೆ ಉಡುಪಿ ಸಂಚಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News