ತಾಯಿ ಸಾವಿನ ಚಿಂತೆಯಲ್ಲಿ ಮಗ ಆತ್ಮಹತ್ಯೆ

Update: 2018-09-17 16:49 GMT

ಕೋಟ, ಸೆ.17: ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟ ತಾಯಿಯ ಚಿಂತೆ ಯಲ್ಲಿ ಮಗ ಅದೇ ದಿನ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.16ರಂದು ರಾತ್ರಿ ಆವರ್ಸೆ ಗ್ರಾಮದ ಹೆದ್ದಾರಮಕ್ಕಿ ಎಂಬಲ್ಲಿ ನಡೆದಿದೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಬೆಳಕು ಪೂಜಾರ್ತಿ ಎಂಬವರು ಸೆ.16ರಂದು ಮೃತಪಟ್ಟಿದ್ದು ಇದೇ ವಿಚಾರದಲ್ಲಿ ಅವರ ಮಗ ಚಂದ್ರ ಪೂಜಾರಿ (38) ಎಂಬವರು ಮಾನಸಿಕವಾಗಿ ನೊಂದು ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News