ಬಂಟ್ವಾಳ: ವೀರಕಂಭ ಗ್ರಾಮ ಅರಣ್ಯ ಸಮಿತಿ ಸಭೆ

Update: 2018-09-18 12:21 GMT

ಬಂಟ್ವಾಳ, ಸೆ. 18: ಕರ್ನಾಟಕ ರಾಜ್ಯ ಇಲಾಖೆ ಬಂಟ್ವಾಳ ವಲಯದ ವೀರಕಂಭ ಗ್ರಾಮ ಅರಣ್ಯ ಸಮಿತಿಯ 2017-18 ಸಾಲಿನ ಮಹಾಸಭೆಯು ಕೆಲಿಂಜ ಶ್ರೀನಿಕೇತನ ಕಲಾಮಂದಿರದಲ್ಲಿ ಮಂಗಳವಾರ ನಡೆಯಿತು.

ವೀರಕಂಭ ಗ್ರಾಮ ಸಮಿತಿ ಅಧ್ಯಕ್ಷ ದಿಲೀಪ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು. 

ಮುಖ್ಯ ಅತಿಥಿಯಾಗಿ ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮಲತಾ, ಮಂಗಳೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಂಕರೇ ಗೌಡ, ವಲಯ ಅರಣ್ಯಧಿಕಾರಿ ಸುರೇಶ್ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಅರಣ್ಯ ರಕ್ಷಕರಾದ ಜಿತೇಶ್, ದಯಾನಂದ, ಕ್ಯಾತಲಿಂಗ, ಅರಣ್ಯ ಸಿಬ್ಬಂದಿಗಳಾದ  ಪ್ರವೀಣ, ಜಯರಾಮ, ಸ್ಥಳೀಯರಾದ ವಿಶ್ವನಾಥ, ನೋಣಯ್ಯ, ಸಂತೋಷ ಕಲ್ಮಲೆ, ಜಗನ್ನಾಥ ಆಳ್ವ, ತೇಜಾಕ್ಷಿ, ಬೇಬಿ ಜೆ.ಆಳ್ವ, ಪದ್ಮನಾಭ, ಜಯಂತಿ, ಗೀತಾ, ಅಬ್ದುಲ್ ಖಾದರ್, ನಿರ್ವಹಣಾ ಸಮಿತಿಯ ಸದಸ್ಯರು ಹಾಗೂ ವಿವಿಧ ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

ಗ್ರಾಮ ಸಮಿತಿ ಕಾರ್ಯದರ್ಶಿ ಯಶೋಧರ ವರದಿವಾಚಿಸಿದರು. ಸದಸ್ಯೆ ರಝಿಯಾ ಸ್ವಾಗತಿಸಿ, ಶಶಿಕಲಾ ವಂದಿಸಿದರು.  ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News