ಮಂಗಳೂರು: ಮೂರು ಬ್ಯಾಂಕ್ಗಳ ವಿಲೀನಕ್ಕೆ ವಿರೋಧಿಸಿ ಪ್ರತಿಭಟನೆ
Update: 2018-09-18 14:29 GMT
ಮಂಗಳೂರು, ಸೆ.18: ಕೇಂದ್ರ ಸರಕಾರವು ಮೂರು ಬ್ಯಾಂಕ್ಗಳ ವಿಲೀನಗೊಳಿಸಲು ಕೈಗೊಂಡ ತೀರ್ಮಾನವನ್ನು ವಿರೋಧಿಸಿ ಮಂಗಳವಾರ ಯುನೈಟೆಡ್ ಫೋರಂ ಬ್ಯಾಂಕ್ ಯೂನಿಯನ್ನ ನೇತೃತ್ವದಲ್ಲಿ ಬ್ಯಾಂಕ್ ನೌಕರರು ಸ್ಟೇಟ್ಬ್ಯಾಂಕ್ ಬಳಿ ಪ್ರತಿಭಟನೆ ನಡೆಸಿದ್ದಾರೆ.
ದೇನಾ ಬ್ಯಾಂಕ್, ವಿಜಯಾ ಬ್ಯಾಂಕ್, ಬ್ಯಾಂಕ್ ಆಪ್ ಬರೋಡ ವಿಲೀನ ಮಾಡದಂತೆ ಆಗ್ರಹಿಸಿದ ಪ್ರತಿಭಟನಾಕಾರರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದರು.